ಪಿಥೋರಗ್ ;ಭಾರಿ ಮಳೆಯಿಂದಾಗಿ ಮೂರು ಮನೆಗಳು ಕುಸಿದಿದ್ದು, ಮೂವರು ಮಕ್ಕಳು ಸಾವನ್ನಪ್ಪಿ, ಹಲವಾರು ಮಂದಿ ನಾಪತ್ತೆಯಾಗಿರುವ ಘಟನೆ ಉತ್ತರಕಾಂಡ್ನ ದಾರ್ಚುಲ್ಲಾ ಉಪವಿಭಾಗದಲ್ಲಿ ನಡೆದಿದೆ. ಜುಮ್ಮಾ ಬೆಟ್ಟದ ತುದಿಯಲ್ಲಿರುವ ಗ್ರಾಮ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದು, ಜನಜೀವನವನ್ನು ಅಸ್ತವ್ಯಸ್ತವಾಗಿದೆ. ನಾಪತ್ತೆಯಾಗಿರುವವರನ್ನು ಹುಡುಕುವ ಕಾರ್ಯಾಚರಣೆಯಲ್ಲಿ ಮೂರು ಮಕ್ಕಳ ಶವಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಆಶೀಸ್ಚವ್ಹಾಣ್ ಹೇಳಿದ್ದಾರೆ.
ಮತ್ತಷ್ಟು ಜೀವ ಹಾನಿಯಾಗಿರುವ ಆತಂಕವೂ ಎದುರಾಗಿದೆ. ಎಸ್ಡಿಆರ್ಎಫ್, ಎನ್ಡಿಆರ್ಎಫ್ ತಂಡಗಳು ಸ್ಥಳಕ್ಕೆ ದಾವಿಸಿದ್ದು, ಪೊಲೀಸರು ಕಂದಾಯ ಇಲಾಖೆ ಅಧಿಕಾರಿಗಳ ಜತೆಗೂಡಿ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ಸಿಂಗ್ ದಾಮಿನಿಯವರು ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಅಗತ್ಯವಾದ ಎಲ್ಲಾ ನೆರವನ್ನು ಸಂತ್ರಸ್ತರಿಗೆ ಒದಗಿಸುವಂತೆ ಸೂಚಿಸಿದ್ದಾರೆ.