ಧಾರವಾಡ: ಅನಧಿಕೃತ ಅಂಗಡಿ ತೆರವುಗೊಳಿಸುವ ಸಂಬಂದದಲ್ಲಿ ವ್ಯಕ್ತಿಯೊಬ್ಬ ಸಹಾಯಕ ಪೋಲೀಸ್ ಕಮೀಷನರ್ ಅವರ ಮೇಲೆ ಪೆಟ್ರೋಲ್ ಎರಚಿರುವ ಘಟನೆ ಧಾರವಾಡದ ಸೂಪರ್ ಮಾರ್ಕೆಟ್ನಲ್ಲಿ ಗುರುವಾರ ನಡೆದಿದೆ.
ಪೋಲೀಸರ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದ ವ್ಯಕ್ತಿ ಓರ್ವ ವಕೀಲನಾಗಿದ್ದು ತನ್ನ ಮೈ ಮೇಲೆ ಸ್ವತಃ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಈ ವೇಳೆ ಇದನ್ನು ತಡೆಯಲು ಬಂದ ಪೊಲೀಸರ ಮೇಲೆಯೇ ಪೆಟ್ರೋಲ್ ಎರಚಿದ ಚೌಧರಿ ಅವಾಂತರ ಸೃಷ್ಟಿಸಿದರು.
ಚೌಧರಿ ಅವರು ಸೂಪರ್ ಮಾರ್ಕೆಟ್ ವ್ಯಾಪಾರಿಗಳ ಪರ ನ್ಯಾಯವಾದಿಯಾಗಿದ್ದಾರೆ. ಮಹಾನಗರ ಪಾಲಿಕೆಯಿಂದ ನಿನ್ನೆ ಅನಧಿಕೃತ ಅಂಗಡಿ ತೆರವು ಕಾರ್ಯ ನಡೆಯುತ್ತಿತ್ತು. ತೆರವು ವಿರೋಧಿಸಿ ಚೌಧರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಡೆಯಲು ಹೋದ ಎಸಿಪಿ ಅನುಷಾ ಮೇಲೆ ಎರಚಿ ಹುಚ್ಚಾಟ ಮೆರೆದಿದ್ದು, ಇದಕ್ಕೆ ಸಂಬಂಧಿಸಿದ ಪೆಟ್ರೋಲ್ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಲೀಸರು ತನಿಖೆ ನಡೆಸುತಿದ್ದಾರೆ.
ಅನಧಕೃತ ಅಂಗಡಿ ತೆರವು; ಪೋಲೀಸರ ಮೇಲೆಯೇ ಪೆಟ್ರೋಲ್ ಎರಚಿದ ವಕೀಲ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.