ಉತ್ತರಪ್ರದೇಶ: ಸಾಹಿತಿ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಎಸ್.ಎಲ್. ಭೈರಪ್ಪ ಅವರು ಶುಕ್ರವಾರ ಲಕ್ನೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು.
ಮೈಸೂರಿನ ಡಾ. ಭೈರಪ್ಪ ಮತ್ತು ಪ್ರೊ. ಪ್ರಧಾನ್ ಗುರುದತ್ತ ,ಅವರು ಸೆಮಿನಾರ್ನಲ್ಲಿ ಭಾಗವಹಿಸಲು ಲಕ್ನೋಗೆ ಬಂದಿದ್ದರು. ಡಾ. ಭೈರಪ್ಪ ಮತ್ತು ಯುಪಿ ಸಿಎಂ ಅವರು ಸೌಜನ್ಯಯುತ ಭೇಟಿಯಾಗಿದ್ದು, ಕೆಲವು ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಡಾ.ಭೈರಪ್ಪ ಮತ್ತು ಪ್ರೊ.ಪ್ರಧಾನ ಗುರುದತ್ತ ಅವರು ಜನವರಿ 22 ರಂದು ಶ್ರೀರಾಮ ಮಂದಿರದ ಶಂಕುಸ್ಥಾಪನೆಗಾಗಿ ಅಯೋಧ್ಯೆಯಲ್ಲಿದ್ದಾರೆ.