ಉತ್ತರಪ್ರದೇಶ: ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆ ಜ.22ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ಹಲವಾರು ಗಣ್ಯರನ್ನು ಆಹ್ವಾನಿಸಲಾಗಿದೆ. ಇದೀಗ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ ಅವರಿಗೂ ಆಹ್ವಾನಿಸಲಾಗಿದ್ದು, ವೀಣೆ ನುಡಿಸಲು ಅವರನ್ನು ಕೋರಲಾಗಿದೆ.
ರಾಮ ಮಂದಿರ ಉದ್ಘಾಟನೆ ದಿನ ಸಮರ್ಪಣ ಮನೋಭಾವದಲ್ಲಿ ಮೇಳ ನಡೆಯಲಿದೆ. ಈ ಮೇಳದಲ್ಲಿ ಕನ್ನಡತಿ ಶುಭಾ ಸಂತೋಷ ವೀಣೆಯನ್ನು ನುಡಿಸಲು ಆಹ್ವಾನಿಸಲಾಗಿದೆ. ಆಹ್ವಾನ ಸಿಕ್ಕ ವಿಷಯ ಕೇಳಿ ಶುಭಾ ಅವರು ಸಂತೋಷಪಟ್ಟಿದ್ದಾರೆ.
ಅಯ್ಯೋಧೆಯಲ್ಲಿ ಸುಮಾರು 22 ರಾಜ್ಯಗಳ ಶಾಸ್ತ್ರೀಯ ಸಂಗೀತಾ ವಾದ್ಯಗಳು ಹಾಗೂ ಹಿಂದುಸ್ತಾನಿ ಸಂಗೀತ ವಾದ್ಯಗಳು ನುಡಿಸಲಿದ್ದಾರೆ.
ರಾಮನ ಮುಂದೆ ಹಾಡಲು 40 ವರ್ಷದ ತಂಜಾವೂರಿನ ವೀಣೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಅಯೋಧ್ಯೆ ಅಹ್ವಾನದಿಂದ ಸಂತಸಗೊಂಡ ಶುಭಾ ಸಂತೋಷ ತಮ್ಮ ಗುರುಗಳಾದ ಶ್ರೀ ಶ್ರೀನಿವಾಸ ಮೂರ್ತಿ ಆಚಾರ್, ಸುಧಾವ್ಯಾದರಾಜ್ , ಹೆಚ್ ಎಅ್ ಸುಧೀಂದ್ರ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.