ಲಕ್ನೋ: ಯುಪಿಯ ಎತ್ವಾ ಜಿಲ್ಲೆಯ ಗ್ರಾಮವೊಂದರಲ್ಲಿ ನಾಲ್ಕು ಮತ್ತು ಆರು ವರ್ಷ ವಯಸ್ಸಿನ ಸಹೋದರಿಯರ ಶಿರಚ್ಛೇದ ನಡೆದ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯರ ಅಕ್ಕನನ್ನು ಬಂಧಿಸಲಾಗಿದೆ.
ಬಲರಾಯ್ ಠಾಣೆ ವ್ಯಾಪ್ತಿಯ ಬಹದ್ದೂರ್ ಪುರ ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಮಕ್ಕಳಾದ ಸುರಭಿ (6) ಮತ್ತು ರೋಶನಿ (4) ಎಂಬಬಾಲಕಿಯರ ಶಿರಚ್ಛೇದ ಮಾಡಲಾಗಿದೆ. ಈ ಬಾಲಕಿಯರ ಅರ್ಧ ಕೊಳೆತ ಶವ ಅದೇ ಮನೆಯ ಬೇರೆ ಬೇರೆ ಕೊಠಡಿಗಳಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಈ ಸಹೋದರಿಯರ ಅಕ್ಕ ಅಂಜಲಿ ಪಾಲ್ (18) ಎಂಬಾಕೆಯನ್ನು ಬಂಧಿಸಲಾಗಿದೆ. ಈ ಅಪರಾಧದ ತಪ್ಪನ್ನು ಯುವತಿ ಒಪ್ಪಿಕೊಂಡಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿದಿದೆ ಎಂದು ಕಾನ್ಪುರ ವಲಯದ ಐಜಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.