ನವದೆಹಲಿ: ಇಸ್ರೇಲ್ನಲ್ಲಿ ನೆಲದಲ್ಲಿ ಯುದ್ಧ ಘೋಷಣೆಯಾದ ಬಳಿಕ ಸಾವು-ನೋವು ವರದಿಯಾಗುತ್ತಿದೆ. ಇತ್ತ ಇಸ್ರೇಲ್ ಜೊತೆ ವಿಶ್ವದ ಹಲವು ರಾಷ್ಟ್ರಗಳು ಬೆಂಬಲವಾಗಿ ನಿಂತಿವೆ. ಭಾರತ ಸಹ ಇಸ್ರೇಲ್ ಪರವಾಗಿ ಬೆಂಬಲ ಸೂಚಿಸಿದೆ. ಆದರೆ “ಕಾಂಗ್ರೆಸ್ ಪ್ಯಾಲೆಸ್ತೀನ್ ಹಕ್ಕುಗಳ ಪರವಾಗಿ ನಿಲ್ಲುವುದಾಗಿ” ತಿಳಿಸಿದೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಿತಿಯು ಪ್ರಕಟಣೆ ಹೊರಡಿಸಿ ಈ ನಿರ್ಧಾರ ಪ್ರಕಟಿಸಿದೆ. ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಯುದ್ಧದಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸಬೇಕು. ಪ್ಯಾಲೆಸ್ತೀನ್ ಜನರ ಭೂಮಿ, ಸ್ವ-ಸರ್ಕಾರ ಮತ್ತು ಬದುಕುವ ಹಕ್ಕುಗಳಿಗಾಗಿ ಅವರಿಗೆ ಬೆಂಬಲ ಸೂಚಿಸುತ್ತೇವೆ ಎಂದಿದೆ.
ʼಇಸ್ರೇಲ್ ಜನರ ಮೇಲಿನ ಕ್ರೂರ ದಾಳಿಯನ್ನು ನಾವು ಖಂಡಿಸುತ್ತೇವೆʼ ಎಂದು ಕಾಂಗ್ರೆಸ್ ಪಕ್ಷವು ಈ ಮೊದಲು ಹೇಳಿತ್ತು. ಇದಾಗಿ ಸಿಡಬ್ಯೂಸಿ ಸಭೆಯ ಬಳಿಕ ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಬೇಡಿಕೆಗಳನ್ನು ಮಾತುಕತೆಯ ಮೂಲಕ ಇತ್ಯರ್ಥಗೊಳಿಸಬೇಕು ಎಂದು ತಮ್ಮ ಪಕ್ಷವು ಯಾವಾಗಲೂ ನಂಬುತ್ತದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.