ಉತ್ತರ ಪ್ರದೇಶ: ವ್ಯಕ್ತಿಯೊಬ್ಬ ತನ್ನ ನಾದಿನಿಯ ಮದುವೆಗೆ ತನ್ನನ್ನು ಆಹ್ವಾನಿಸಿಲ್ಲ ಎನ್ನುವ ಕಾರಣಕ್ಕೆ ನಿವೃತ್ತ ಯೋಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋ ದಲ್ಲಿ ನಡೆದಿದೆ.
ಮೃತನ ಪತ್ನಿ ತನ್ನ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು, ಆದರೆ ಅವರು ತನ್ನನ್ನು ಆಹ್ವಾನಿಸಿಲ್ಲ ಎನ್ನುವ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
47 ವರ್ಷದ ಅನಿಲ್ ವರ್ಮಾ, ಹರ್ದೋಯ್ ಕಾಸಿಂಪುರ ನಿವಾಸಿಯಾಗಿದ್ದು, ಸೇನೆಯಿಂದ ನಿವೃತ್ತರಾಗಿದ್ದರು. ಅವರು ಪತ್ನಿ ವಿನೀತಾ, ಪುತ್ರರಾದ ಅನಿಕೇಶ್ ಮತ್ತು ಆರ್ಯನ್ ಅವರನ್ನು ಅಗಲಿದ್ದಾರೆ. ಎರಡು ದಿನಗಳ ಹಿಂದೆ ವಿನೀತಾ ತನ್ನ ಅಕ್ಕನ ಮದುವೆಗೆ ಮಕ್ಕಳೊಂದಿಗೆ ಪೋಷಕರ ಮನೆಗೆ ಹೋಗಿದ್ದಳು. ಮನೆಯಲ್ಲಿ ಅನಿಲ್ ಒಬ್ಬನೇ ಇದ್ದ.
ಶನಿವಾರ ರಾತ್ರಿ ವಿನೀತಾ ತನ್ನ ಪತಿಗೆ ಕರೆ ಮಾಡಿದ್ದಳು. ಫೋನ್ ರಿಸೀವ್ ಮಾಡದಿದ್ದಾಗ ವಿನೀತಾ ತನ್ನ ಗಂಡನ ಯೋಗಕ್ಷೇಮ ವಿಚಾರಿಸುವಂತೆ ಮನೆಯ ಮಾಲೀಕರನ್ನು ಕೇಳಿದ್ದಳು. ಇನ್ಸ್ ಪೆಕ್ಟರ್ ಪ್ರಕಾರ ಅನಿಲ್ ಶವವನ್ನು ಅವರೇ ಮೊದಲ ಬಾರಿಗೆ ಕಂಡಿದ್ದಾರೆ.
ಈ ಭಯಾನಕ ದೃಶ್ಯವನ್ನು ನೋಡಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಾಗಿಲು ಒಡೆದು ಶವವನ್ನು ಕುಣಿಕೆಯಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು. ಅತ್ತಿಗೆಯ ಮದುವೆಗೆ ಆಹ್ವಾನ ಬಂದಿಲ್ಲ ಎಂಬ ಕಾರಣಕ್ಕೆ ಮೃತರು ಮನನೊಂದಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.