News Karnataka Kannada
Saturday, May 04 2024
ಉತ್ತರ ಪ್ರದೇಶ

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ಪಡೆಯಬೇಕು: ಯೋಗಿ ಆದಿತ್ಯನಾಥ್‌

Yogi Adithya
Photo Credit :

ಉತ್ತರ ಪ್ರದೇಶದಲ್ಲಿ ಇನ್ನುಮುಂದೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ಪಡೆಯಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದಾರೆ.

ಈಕುರಿತು ಮಾತನಾಡಿರುವ ಅವರು “ಅನುಮತಿಯ ಮೇರೆಗೆ ಧಾರ್ಮಿಕ ಪ್ರದೇಶದಲ್ಲಿ ಧ್ವನಿ ವರ್ಧಕಗಳನ್ನು ಬಳಸಬೇಕು. ಆದರೆ ಧ್ವನಿವರ್ಧಕದ ಶಬ್ದವು ಆ ಪ್ರದೇಶದ ಆವರಣವನ್ನು ಬಿಟ್ಟು ಹೊರಬರುವಂತಿಲ್ಲ. ಹಾಗೂ ಯಾವುದೇ ಹೊಸ ಅನುಮತಿಗಳನ್ನು ನೀಡುವುದಿಲ್ಲ” ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ ನಲ್ಲಿ ಪೋಲೀಸರು ಧ್ವನಿವರ್ಧಕಗಳನ್ನು ನಿಷೇಧಿಸಿದ ಮೂರೇದಿನಗಳಲ್ಲಿ ಯೋಗಿ ಹೇಳಿಕೆಯನ್ನು ನೀಡಿದ್ದಾರೆ. ನಾಸಿಕ್‌ ನಲ್ಲಿ ಮಸೀದಿಗಳ ʼಆಜಾನ್‌ʼ ಗಿಂತ 15 ನಿಮಿಷ ಮೊದಲು ಮತ್ತು ನಂತರ ಹನುಮಾನ್‌ ಚಾಲೀಸಾ ಹಾಕದಂದೆ ನಿಷೇಧ ವಿಧಿಸಲಾಗಿತ್ತು. ಈಗ ಉತ್ತರ ಪ್ರದೇಶದಲ್ಲಿಯೂ ಯೋಗಿ ಆದೇಶ ಹೊರಡಿಸಿದ್ದಾರೆ.

ಈಕುರಿತು ಅವರು “ಪ್ರತಿಯೊಬ್ಬರಿಗೂ ಅವರ ಇಚ್ಛೆಯ ಪೂಜಾ ವಿಧಾನವನ್ನು ಆಯ್ಕೆಮಾಡುವ ಮತ್ತು ಅನುಸರಿಸುವ ಹಕ್ಕಿದೆ. ಅದರೆ ಅದರಿಂದ ಇತರರಿಗೆ ತೊಂದರೆಯಾಗಬಾರದು” ಎಂದಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು