News Karnataka Kannada
Thursday, May 09 2024
ಉತ್ತರ ಪ್ರದೇಶ

ಉತ್ತರಪ್ರದೇಶ: ಕುಡಿದ ಮತ್ತಿನಲ್ಲಿ ಮಗನನ್ನು ಹತ್ಯೆಗೈದ ತಂದೆ

Crime
Photo Credit :

ಉತ್ತರಪ್ರದೇಶ : ಕುಡುಕ ತಂದೆಯೊಬ್ಬ ಸಿಟ್ಟಿನಲ್ಲಿ ತನ್ನ ಒಂಭತ್ತು ವರ್ಷದ ಮಗನನ್ನ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಮೈನ್‌ಪುರಿ ಜಿಲ್ಲೆಯ ಅಲವಲ್‌ಪುರದ ಮಾದಯ್ಯ ಗ್ರಾಮದ ನಿವಾಸದಲ್ಲಿ, ಪಾಪಿ ತಂದೆ ತನ್ನ ನಾಲ್ಕು ವರ್ಷದ ಮಗಳ ಸಮ್ಮುಖದಲ್ಲೇ ಆಕೆಯ ಅಣ್ಣನನ್ನ ಕೊಂದಿದ್ದಾನೆ. ಕೇವಲ ಮೊಬೈಲ್ ಫೋನ್ ಹುಡುಕಿಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಈ ಕೃತ್ಯ ಎಸಗಿರುವ ಪಾಪಿಯನ್ನ ಮುಖೇಶ್ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಮಂಗಳವಾರ ಸಂಜೆ, ಮುಖೇಶ್ ಚೆನ್ನಾಗಿ ಕುಡಿದ ಮತ್ತಿನಲ್ಲಿ ಮನೆಗೆ ಮರಳಿದ್ದಾನೆ. ನಶೆಯಲ್ಲಿದ್ದ ಆರೋಪಿಗೆ ಅವನ ಫೋನ್ ಎಲ್ಲಿಟ್ಟಿದ್ದ ಎಂಬುದು ನೆನಪಿರಲಿಲ್ಲ‌. ಈ ವೇಳೆ ಫೋನ್ ಹುಡುಕುವಂತೆ ಆತ ತನ್ನ ಮಗ ಮಿಥುನ್‌ಗೆ ಹೇಳಿದ್ದಾನೆ. ಆದರೆ, ಮಗುವಿಗೆ ಫೋನ್ ಅನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದರಿಂದ ಕುಪಿತಗೊಂಡ ಮುಖೇಶ್ ಒಂಭತ್ತು ವರ್ಷದ ಕಂದನ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯಕ್ಕೆ ಆತನ ನಾಲ್ಕು ವರ್ಷದ ಮಗಳು ಫಲಕ್ ಸಾಕ್ಷಿಯಾಗಿದ್ದಾಳೆ.

ಬುಧವಾರ, ಮೃತ ಮಗುವಿನ ಅಜ್ಜ ಲಖನ್ ಸಿಂಗ್ ಅವರು ಮುಖೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಮುಖೇಶ್ ಗೆ ಕುಡಿತದ ಚಟ ಇತ್ತು ಎಂದು ಲಖನ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವನ ದುರಾಭ್ಯಾಸಗಳಿಂದ ಅವನ ಹೆಂಡತಿ ವಿಜಯಕುಮಾರಿ ಮನೆಬಿಟ್ಟು ಹೋಗಿದ್ದಾರೆ‌. ಎಂಟು ತಿಂಗಳ ಹಿಂದೆ, ಅವರು ತಮ್ಮ ಆರು ಮಕ್ಕಳಲ್ಲಿ ನಾಲ್ವರು ಮಕ್ಕಳೊಂದಿಗೆ ಪಂಜಾಬ್‌ಗೆ ತೆರಳಿ ಅಲ್ಲಿ ನೆಲೆಸಿದ್ದಾರೆ. ಫಲಕ್ ಮತ್ತು ಮಿಥುನ್ ಅವರ ಅಪ್ಪನೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ದೂರನ್ನು ಸ್ವೀಕರಿಸಿದ ಪೊಲೀಸರು, ಐಪಿಸಿ ಸೆಕ್ಷನ್ 304, ಕೊಲೆ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಿಥುನ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು