News Karnataka Kannada
Thursday, May 09 2024
ದೇಶ

ಭಾರತದ ಈಶಾನ್ಯ ಗಡಿಯಲ್ಲಿ ಉದ್ವಿಗ್ನತೆ: ಮಯನ್ಮಾರ್ ಬಂಡುಕೋರರಿಂದ ದಾಳಿ

Myn
Photo Credit : News Kannada

ಮಯನ್ಮಾರ್‌ನಲ್ಲಿ ಬಂಡಾಯ ಹೋರಾಟಗಾರರು ಸೇನಾ ಆಡಳಿತದ ವಿರುದ್ಧ ದಾಳಿ ನಡೆಸುತ್ತಿದ್ದು, ಸೇನೆಯ ಅಧಿಕಾರಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ. ಇದರಿಂದಾಗಿ ಈಶಾನ್ಯ ಭಾರತದ ರಾಜ್ಯಗಳ ಜನರು ಗಡಿ ಪ್ರದೇಶಗಳಿಗೂ ಉದ್ವಿಗ್ನತೆ ಹರಡಿದರೆ ಎಂದು ಆತಂಕ ಪಡುತ್ತಿದ್ದಾರೆ. ಭಾರತ ತನ್ನ ನೆರೆಯ ಮಯನ್ಮಾರ್‌ ನಲ್ಲಿ ಹೆಚ್ಚುತ್ತಿರುವ ದ ತ್ರೀ ಬ್ರದರ್‌ಹುಡ್ ಅಲಯನ್ಸ್ (3ಬಿಎಚ್ಎ) ದಾಳಿಗಳ ಕುರಿತು ಸೂಕ್ಷ್ಮವಾದ ಕಣ್ಣಿಟ್ಟಿದೆ.

ತ್ರೀ ಬ್ರದರ್‌ಹುಡ್ ಅಲಯನ್ಸ್ (3ಬಿಎಚ್ಎ) ಎನ್ನುವುದು ಮಯನ್ಮಾರಿನ ಮೂರು ಪ್ರತ್ಯೇಕತಾವಾದಿ ಸಂಘಟನೆಗಳ ಒಕ್ಕೂಟವಾಗಿದೆ. ಈ ಒಕ್ಕೂಟ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ (ಕೆಐಎ), ಅರಾಕನ್ ಆರ್ಮಿ (ಎಎ), ಹಾಗೂ ತಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿ (ಟಿಎನ್ಎಲ್ಎ) ಎಂಬ ಮೂರು ಸಂಘಟನೆಗಳನ್ನು ಒಳಗೊಂಡಿದೆ.

ಇನ್ನು ಭಾರತ ಪ್ರಸ್ತುತ ಮಯನ್ಮಾರ್ ಜೊತೆ ಗಡಿ ಹಂಚಿಕೊಂಡಿರುವ ತನ್ನ ರಾಜ್ಯಗಳಾದ ಮಣಿಪುರ ಮತ್ತು ಮಿಜೋರಾಂಗಳ ಸುರಕ್ಷತೆಯ ಕುರಿತು ಹೆಚ್ಚಿನ ಚಿಂತೆಗೊಳಗಾಗಿದೆ. ಅಕ್ಟೋಬರ್ 27ರಂದು, 3ಬಿಎಚ್ಎ ಮಯನ್ಮಾರ್ ಉತ್ತರದಲ್ಲಿರುವ ಶಾನ್ ಸ್ಟೇಟ್‌ನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು.

ಪ್ರಸ್ತುತ ದಾಳಿಯನ್ನು ‘ಆಪರೇಶನ್ 1027’ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದು ದಿನೇ ದಿನೇ ವ್ಯಾಪಕಗೊಳ್ಳುತ್ತಿದೆ. ಇದು ಈಗಾಗಲೇ 135 ಮಿಲಿಟರಿ ತಾಣಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಇನ್ನು ಭಾರತ ಈ ಹಿಂಸಾಚಾರಗಳು ಕೊನೆಯಾಗಬೇಕೆಂದು ಆಗ್ರಹಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಾಗ್ಚಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ನಾವು ಮಯನ್ಮಾರ್‌ನಲ್ಲಿ ಶಾಂತಿ, ಸ್ಥಿರತೆ ಹಾಗೂ ಪ್ರಜಾಪ್ರಭುತ್ವ ಮರಳಬೇಕೆಂದು ಆಗ್ರಹಿಸುತ್ತಿದ್ದೇವೆ” ಎಂದಿದ್ದಾರೆ.

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು