ತೆಲಂಗಾಣ: ತೆಲಂಗಾಣ ವಿಧಾನಸಭೆ ಚುನಾವಣೆ ದಿನಾಂಕ ಸಮೀಪಿಸುತ್ತಿವೆ. ಪ್ರಚಾರ ಬಿರುಸುಗೊಂಡಿದೆ. ಈ ನಡುವೆ ತೆಲಂಗಾಣ ಸಚಿವ ಸಚಿವ ಕೆಟಿ ರಾಮರಾವ್ ಅವರು ತಮ್ಮ ತಂಡದೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ವಾಹನದ ಛಾವಣಿ ಮೇಲೆ ಹತ್ತಿದ್ದರು.
ಈ ವೇಳೆ ವೇಗವಾಗಿ ಸಾಗುತ್ತಿದ್ದ ಟಿಟಿ ವಾಹನ ಒಮ್ಮೆಲೆ ಬ್ರೇಕ್ ಹಾಕಿದಾಗ ಸಚಿವರು ಸಹಿತ ಎಲ್ಲರೂ ಮುಗ್ಗರಿಸಿದ್ದಾರೆ. ನಿಜಾಮಾಬಾದಿನ ಅರ್ಮೂರು ಎಂಬಲ್ಲಿ ಈ ಘಟನೆ ನಡೆದಿದೆ. ಜೀವನ್ ರೆಡ್ಡಿ ಅವರು ನಾಮಪತ್ರ ಸಲ್ಲಿಸಲು ತೆರಳುತ್ತಿದ್ದಾಗ ವಾಹನದ ಚಾಲಕ ಸಡನ್ ಆಗಿ ಬ್ರೇಕ್ ಹಾಕಿದಾಗ ಈ ಆಕಸ್ಮಿಕ ಘಟನೆ ನಡೆದಿದೆ. ಮುಂದೇನಾಯ್ತು ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.