ಭಗವದ್ಗೀತೆ ಹಿಂದೂ ತತ್ತ್ವಶಾಸ್ತ್ರದಲ್ಲಿ ಪುರಾತನ ಮತ್ತು ಗೌರವಾನ್ವಿತ ಪಠ್ಯವಾಗಿದ್ದು, ಇತಿಹಾಸದುದ್ದಕ್ಕೂ ವಿವಿಧ ವ್ಯಾಖ್ಯಾನಗಳು ಮತ್ತು ವಿಶ್ಲೇಷಣೆಗಳಿಗೆ ಒಳಪಟ್ಟಿದೆ. ಆದಾಗ್ಯೂ, ಪ್ರಸಿದ್ಧ ಸ್ಲೋವೇನಿಯನ್ ತತ್ವಜ್ಞಾನಿ ಸ್ಲಾವೊಜ್ ಜಿಜೆಕ್ ಅವರ ಇತ್ತೀಚಿನ ಭಗವದ್ಗೀತೆ ಕುರಿತ ವಿವಾದಾತ್ಮಕ ಹೇಳಿಕೆಗಳು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ.
ಎಕ್ಸ್ ನಲ್ಲಿ YearOfTheKraken ಅವರು ಟ್ವಿಟರ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, “ಜಿಜೆಕ್ ಭಗವದ್ಗೀತೆಯನ್ನು ಹರಿದು ಹಾಕಿದ್ದಾರೆ ಮತ್ತು ಅದನ್ನು ‘ಅತ್ಯಂತ ಅಶ್ಲೀಲ, ಅಸಹ್ಯಕರ ಪವಿತ್ರ ಪುಸ್ತಕಗಳಲ್ಲಿ ಒಂದಾಗಿದೆ’ ಎಂದು ಕರೆದಿದ್ದಾರೆ. ಜರ್ಮನಿಯ ನಾಜಿ ರಾಜಕಾರಣಿ ಹೆನ್ರಿಕ್ ಹಿಮ್ಲರ್ ಯಹೂದಿಗಳ ಮೇಲಿನ ನರಮೇಧವನ್ನು ಸಮರ್ಥಿಸಲು ಭಗವದ್ಗೀತೆಯನ್ನು ಬಳಸಿದ್ದಾರೆ ಎಂದು ತತ್ವಜ್ಞಾನಿ ಹೇಳಿಕೊಂಡಿದ್ದಾನೆ. ಈ ವಿಚಾರ ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
Slavoj Žižek, the most prominent communist philosopher in the world currently, calls Bhagavad Gita "one of the most obscene disgusting sacred books" and blames Bhagavad Gita for Nazi Heinrich Himmler allegedly using it to justify genocide of Jews pic.twitter.com/9lrIzJXetZ
— Sensei Kraken Zero (@YearOfTheKraken) November 7, 2023
“ಒಪ್ಪೆನ್ಹೈಮರ್ ಉತ್ತಮ ಚಿತ್ರವಾಗಿದೆ. ಆದರೆ, ನಾನು ಭಗವದ್ಗೀತೆಯ ಆಧ್ಯಾತ್ಮಿಕ ಭಾಗವನ್ನು ದ್ವೇಷಿಸುತ್ತೇನೆ” ಎಂದು ಅವರು ಎಕ್ಸ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ. ಹೌದು ನಾವು ಯಹೂದಿ ಮಕ್ಕಳನ್ನು ಮತ್ತು ಇತರರನ್ನು ಕೊಲ್ಲುವ ಭಯಾನಕ ಕೆಲಸಗಳನ್ನು ಮಾಡುತ್ತಿದ್ದೇವೆ. ನಾವೇ ಮೃಗಗಳಾಗದೆ ಅದನ್ನು ಹೇಗೆ ಮಾಡಬಲ್ಲೆವು?” ಎಂದು ಜಿಜೆಕ್ ಪ್ರತಿಪಾದಿಸಿದರು. ಯಹೂದಿಗಳ ನರಮೇಧವನ್ನು ಸಮರ್ಥಿಸಲು ಭಗವದ್ಗೀತೆಯನ್ನು ಬಳಸಿದ್ದಾರೆ ಎಂದು ದೂಷಿದ್ದಾರೆ.