ಹೈದರಾಬಾದ್: ಟಾಲಿವುಡ್ ನಲ್ಲಿ ಪ್ರೇಕ್ಷಕರ ಮನಗೆದ್ದು, ರಾಜಕೀಯವಾಗಿಯೂ ಸದ್ದು ಮಾಡಿದ್ದ ʼಯಾತ್ರಾʼ ಸಿನಿಮಾದ ಸೀಕ್ವೆಲ್ ಇಂದು(ಫೆ.8 ರಂದು) ರಿಲೀಸ್ ಆಗಿದೆ. ನಿರೀಕ್ಷೆಯಂತೆ ಆಂಧ್ರದ ಹಲವು ಕಡೆ ಸಿನಿಮಾಕ್ಕೆ ಭರ್ಜರಿ ಆರಂಭ ಸಿಕ್ಕಿದೆ.
ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಥಿಯೇಟರ್ ವೊಂದರಲ್ಲಿ ಅಭಿಮಾನಿಗಳ ನಡುವೆ ವಾಗ್ವಾದ ಉಂಟಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟ ಪವನ್ ಕಲ್ಯಾಣ್ ಹಾಗೂ ಆಂಧ್ರ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಅಭಿಮಾನಿಗಳ ನಡುವೆ ಈ ಜಗಳ ನಡೆದಿದೆ.
ಹೈದರಾಬಾದ್ನ ಪ್ರಸಾದ್ ಥಿಯೇಟರ್ನಲ್ಲಿ ಈ ಮಾರಾಮಾರಿ ನಡೆದಿದೆ. ಎರಡೂ ಕಡೆ ಅಭಿಮಾನಿಗಳ ನಡುವೆ ವಾಗ್ವಾದ ಉಂಟಾಗಿದೆ. ಪರಿಣಾಮ ಒಬ್ಬರನ್ನೊಬ್ಬರು ದೂಡಿಕೊಂಡಿದ್ದಾರೆ. ಗಲಾಟೆಗೆ ಏನು ಕಾರಣ ಎನ್ನುವುದು ಇದುವರೆಗೆ ತಿಳಿದು ಬಂದಿಲ್ಲ.
Reportedly, Fans of #YSJagan and #PawanKalyan clashed during the screening of #Yatra2 at Prasads, Hyderabad. pic.twitter.com/USWM6BsUxK
— Gulte (@GulteOfficial) February 8, 2024