News Karnataka Kannada
Tuesday, April 30 2024
ತೆಲಂಗಾಣ

ತೆಲಂಗಾಣ: ಚಕ್ಕುಲಿ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

ವ್ಯಕ್ತಿಯೊಬ್ಬರು ಸಂಜೆಯ ಚಹಾದ ಸಮಯದಲ್ಲಿ ಚಕ್ಕುಲಿ ತಿಂದಿದ್ದು, ಅದು ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರಾಟದ ಸಮಸ್ಯೆಯಿಂದಾಗಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.
Photo Credit : News Kannada

ತೆಲಂಗಾಣ: ವ್ಯಕ್ತಿಯೊಬ್ಬರು ಸಂಜೆಯ ಚಹಾದ ಸಮಯದಲ್ಲಿ ಚಕ್ಕುಲಿ ತಿಂದಿದ್ದು, ಅದು ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರಾಟದ ಸಮಸ್ಯೆಯಿಂದಾಗಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಮಂಚಿರ್ಯಾಲ್‌ನ ಹಮಾಲಿವಾಡದ ಎನ್‌ ರಂಗರಾವ್‌ (65) ದಿನಗೂಲಿ ಕಾರ್ಮಿಕ ಸಂಜೆ ಚಹಾ ಕುಡಿಯುವ ವೇಳೆ ಚಕ್ಕುಲಿ ತಿಂದಿದ್ದಾರೆ.

ಎಲ್ಲರ ಜೊತೆಯಲ್ಲಿ ಮಾತನಾಡುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದ ರಂಗರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ರಂಗರಾವ್ ಸಾವಿನ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಂಜೆಯ ವೇಳೆ ಚಹಾದ ಜೊತೆಗೆ ಸೇವಿಸಿದ್ದ ಚಕ್ಕುಲಿ ಗಂಟಲಲ್ಲಿ ಸಿಕ್ಕಿ ಉಸಿರುಗಟ್ಟಿ ರಂಗರಾವ್ ಮೃತಪಟ್ಟಿರುವುದು ತನಿಖೆಯ ವೇಳೆ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು