ತೆಲಂಗಾಣ: ತೆಲಂಗಾಣದ ನಲ್ಲಗೊಂಡ ಜಿಲ್ಲೆಯಲ್ಲಿ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂಪು ಪಾನೀಯದಲ್ಲಿ ಕೀಟನಾಶಕ ಬೆರೆಸಿ ತನ್ನ ಮಕ್ಕಳನ್ನು ಕೊಂದು, ನಂತರ ಕಿಶನ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನುನಾವತ್ ಗ್ಯಾಂಗ್ ನ ಕಿಶನ್ ನಾಯಕ್ ಎಂಬುವವರ ಜಮೀನಿನಲ್ಲಿ ಕಿಶನ್ ಹಾಗೂ, ಅವರ ಮಕ್ಕಳಾದ ಹರ್ಷವರ್ಧನ್ (8) ಮತ್ತು ಅಖಿಲ್ (6) ಮೃತದೇಹಗಳು ಗ್ರಾಮಸ್ಥರಿಗೆ ಪತ್ತೆಯಾಗಿವೆ.
ಕೌಟುಂಬಿಕ ಕಲಹದಿಂದ ಈ ದುಷ್ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ