ಚೆನ್ನೈ: ಬಿರಿಯಾನಿ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನ ಕೊಲೆಯಾಗಿರುವ ಘಟನೆ ತಮಿಳುನಾಡಿನ ಚೆನ್ನೈನ ಮಣ್ಣೂರುಪೇಟೆ ಬಸ್ ನಿಲ್ದಾಣದ ಬಳಿ ನಡೆದಿದೆ. ಮೃತರನ್ನು ಬಾಲಾಜಿ (22)ಎಂದು ಗುರತಿಸಲಾಗಿದೆ.
ಈ ಯುವಕ ರಾತ್ರಿ ಊಟ ಮಾಡಲು ಮಣ್ಣೂರುಪೇಟೆ ಬಸ್ ನಿಲ್ದಾಣದ ಬಳಿ ಸ್ನೇಹಿತರೊಂದಿಗೆ ಬಂದು ಬೀದಿಬದಿಯ ಸ್ಟಾಲ್ ಒಂದರಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದಾನೆ, ಇದೇ ಸಮಯಕ್ಕೆ ಮದ್ಯಪಾನ ಮಾಡಿರುವ ಮೂವರು ವ್ಯಕ್ತಿಗಳು ಅದೇ ಸ್ಟಾಲ್ಗೆ ಬಂದು, ಅವರು ಕೂಡ ಆರ್ಡರ್ ಮಾಡಿದ್ದಾರೆ. ಸ್ಟಾಲ್ ಮಾಲೀಕ ಮೊದಲು ಆರ್ಡರ್ ಮಾಡಿದವರಿಗೆ ಬಿರಿಯಾನಿ ನೀಡಿದ್ದಾನೆ.
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈ ಮೂವರು ಕುಡುಕರು ಬಾಲಾಜಿಗೆ ರಾಡ್ನಿಂದ ಹೊಡೆದಿದ್ದಾರೆ. ಬಲವಾದ ಏಟು ಬಿದ್ದ ಪರಿಣಾಮ ಯುವಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.ಕುಡಿದ ಅಮಲಿನಲ್ಲಿದ್ದ ವ್ಯಕ್ತಿಗಳು ಬಾಲಾಜಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂರತೆ ಚೆನ್ನೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.