ಚೆನ್ನೈ: ಉಡುಪಿ ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ 45ನೇ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳುವ ಸಲುವಾಗಿ ಚೆನ್ನೈ ಮಹಾನಗರಕ್ಕೆ ಬಂದರು.
ಈ ಪ್ರಯುಕ್ತ ಚೆನ್ನೈ ಮಹಾನಗರದ ಟ್ರಿಪ್ಲಿಕೆನ್ ನಲ್ಲಿ ಪುರಪ್ರವೇಶವನ್ನು ಶ್ರೀಗಳು ಮಾಡಿದರು. ಈ ಸಂದರ್ಭದಲ್ಲಿ ಟ್ರಿಪ್ಲಿಕೇನ್ ನ ವ್ಯಾಸರಾಜ ಮಠದಲ್ಲಿ ಆಯೋಜಿಸಿದ್ದ ಪುರಪ್ರವೇಶ ಸಭೆಗೆ ಸನಾತನ ಧರ್ಮದ ಪಬ್ಲಿಕ್ ಸ್ಪೀಕರ್ ಆದ ದುಷ್ಯಂತ್ ಶ್ರೀಧರ್ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಪಲಿಮಾರು ಮಠದ ಪಿ.ಆರ್. ಓ. ಶ್ರೀಶ ಭಟ್ ಕಡೆಕಾರ್ ಹಾಗೂ ಮುಖ್ಯಸ್ಥ ಕೆ. ಗಿರೀಶ್ ಉಪಾಧ್ಯಾಯ ಉಪಸ್ಥಿತರಿದ್ದರು.