News Karnataka Kannada
Saturday, May 04 2024
ತಮಿಳುನಾಡು

ಮಲತಂದೆಯಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಖಾಸಗಿ ಬಸ್​ ಕ್ಲೀನರ್ ಅತ್ಯಾಚಾರ ಎಸಗಿದ ಘಟನೆ ಸಂಭವಿಸಿದೆ.
Photo Credit : IANS

ಈರೋಡ್‌: ತಮಿಳುನಾಡಿನ ಈರೋಡ್‌ ಜಿಲ್ಲೆಯಲ್ಲಿ ಅತ್ಯಂತ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳು, ತನ್ನ ಮಲತಂದೆಯಿಂದಲೇ ಹಲವು ಬಾರಿ ಅತ್ಯಾಚಾರಕ್ಕೊಳಗಾಗಿದ್ದಾಳೆ.

ಮಾತ್ರವಲ್ಲ ಶಿಶುಜನನಕ್ಕೆ ನೆರವಾಗುವ ಅಂಡಾಣುಗಳನ್ನು (ಸ್ತ್ರೀ ಋತುಮತಿಯಾದ ನಂತರ ಆಕೆಯಲ್ಲಿ ಹುಟ್ಟುವ ಕೋಶಗಳು) ಆಕೆಯಿಂದ ಬಲಾತ್ಕಾರವಾಗಿ ಮಾರಾಟ ಮಾಡಿಸಲಾಗಿದೆ. ಕನಿಷ್ಠ ಎಂಟು ಬಾರಿ ಹೀಗೆ ಮಾಡಲಾಗಿದೆ.

ಅಪ್ರಾಪ್ತೆ ವಯಸ್ಕ ಬಾಲಕಿ ಋತುಮತಿಯಾದಾಗಿನಿಂದ ಆಕೆಯ ಮಲತಂದೆ ಸೈಯದ್‌ ಅಲಿ (40), ತಾಯಿ ಎಸ್‌.ಇಂದ್ರಾಣಿಯೇ ಈ ಕೆಲಸ ಮಾಡಿಸುತ್ತಿದ್ದಾರೆ. ಇದರಿಂದ ಹಣ ಗಳಿಸುತ್ತಿದ್ದಾರೆ. ಮಾಲತಿ ಎಂಬ ಮಧ್ಯವರ್ತಿ ಈ ಬಾಲಕಿಯ ವಯಸ್ಸನ್ನು ಆಧಾರ್‌ ಕಾರ್ಡ್‌ನಲ್ಲಿ ಬದಲಾಯಿಸಿದ್ದಾಳೆ. ಕೆಲವು ದಿನಗಳ ಈ ಹಿಂದೆ ಅಪ್ರಾಪ್ತೆ ಮನೆಯಿಂದ ತಪ್ಪಿಸಿಕೊಂಡು, ಸೇಲಂನಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಳು. ನಂತರ ಸಂಬಂಧಿಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದರಿಂದ ಈ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಸೈಯದ್‌, ಇಂದ್ರಾಣಿ, ಮಾಲತಿಯನ್ನು ಬಂಧಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು