News Karnataka Kannada
Wednesday, May 08 2024
ತಮಿಳುನಾಡು

ವಿಶೇಷ ರೈಲು ದರ ಹೆಚ್ಚಳ ಪ್ರಯಾಣಿಕರ ಆಕ್ರೋಶ

Railway Delhi 17 6 21 Dt 176216 1 Newsk 9508623154
Photo Credit :

ಕೂನೂರು: ನೀಲ್ ಗಿರಿ ಮೌಂಟೇನ್ ರೈಲ್ವೇ ಗಾಂಧಿ ಜಯಂತಿ ದಿನದಂದು ತನ್ನ ರೈಲಿನಲ್ಲಿ ಪ್ರಯಾಣಿಸುವವರಿಗೆ ಅತಿ ದುಬಾರಿ ಮೊತ್ತದ ಶುಲ್ಕ ವಿಧಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

ಗಾಂಧಿ ಜಯಂತಿ ದಿನದಂದು ನೀಲ್ ಗಿರಿ ಮೌಂಟೇನ್ ರೈಲ್ವೇ ವಿಶೇಷ ರೈಲಿನ ವ್ಯವಸ್ಥೆ ಮಾಡಿತ್ತು. ಗಾಂಧಿ ಜಯಂತಿ ವರ್ಷಾಚರಣೆ ಅಂಗವಾಗಿ ವಿಶೇಷ ರೈಲಿನ ಏರ್ಪಾಡು ನಡೆದಿತ್ತು.

ಮೆಟ್ಟು ಪಾಳ್ಯಂ ನಿಂದ ಕೂನೂರು ತನಕ ಫರ್ಸ್ಟ್ ಕ್ಲಾಸ್ ಟಿಕೆಟ್ ಗೆ ೧,೧೦೦ ರೂ., ಸೆಕೆಂಡ್ ಕ್ಲಾಸ್ ಗೆ ೮೦೦ ರೂ. ನಿಗದಿ ಪಡಿಸಿತ್ತು. ಮೆಟ್ಟುಪಾಳ್ಯಂನಿಂದ ಊಟಿ ಮಾರ್ಗದಲ್ಲಿ ಮೊದಲ ಕ್ಲಾಸ್ಗೆ ೧,೪೫೦ ರೂ., ಸೆಕೆಂಡ್ ಕ್ಲಾಸ್ ಗೆ ೧,೦೫೦ ರೂಪಾಯಿ ಇದೆ.

ಇದನ್ನು ಹೊರತು ಪಡಿಸಿ ಜಿ ಎಸ್ ಟಿ ಎಕ್ಸ್ಟ್ರಾ. ಮೆಟ್ಟುಪಾಳ್ಯಂನಿಂದ ಕೂನೂರು ಬಸ್ ನಲ್ಲಿ ರೂ.೩೬ ಶುಲ್ಕವಿದೆ. ಹೀಗಿರುವಾಗ ರೈಲ್ವೇ ಅಷ್ಟು ದೊಡ್ಡ ಮೊತ್ತ ನಿಗದಿ ಪಡಿಸಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ನೀಲ್ ಗಿರಿ ರೈಲ್ವೇ ನಿಗದಿ ಪಡಿಸಿರುವ ಟಿಕೆಟ್ ಶುಲ್ಕದಲ್ಲಿ ಕೇವಲ ಶ್ರೀಮಂತರು, ಉದ್ಯಮಿಗಳು ಸೆಲಬ್ರಿಟಿಗಳು ಪ್ರಯಾಣಿಸಬಹುದಷ್ಟೇ. ಜನಸಾಮಾನ್ಯರು ರೈಲು ಹತ್ತಬೇಕೆನ್ನುವ ಉದ್ದೇಶ ಅಧಿಕಾರಿಗಳಿಗೆ ಇದ್ದಂತಿಲ್ಲ ಎಂದು ಜನರು ಕಿಡಿ ಕಾರಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು