ಸಿಂಗಾಪುರ: ಸಿಂಗಾಪುರದಲ್ಲಿ ಕ್ರೂಸ್ ನಲ್ಲಿ ಹೋಗುವಾಗ ಬಿದ್ದು ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಲ್ ಕೆರಿಬಿಯನ್ ಕ್ರೂಸ್ನಿಂದ ಬಿದ್ದು ಭಾರತೀಯ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೆಲ್ಬೋರ್ನ್ ಮೂಲದ ಉದ್ಯಮಿಯಾಗಿರುವ ಅವರ ಮಗ, ತನ್ನ ತಾಯಿಯನ್ನು ಪತ್ತೆಹಚ್ಚಲು ಸಹಾಯ ಕೋರಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಅಪೂರ್ವ ಸಹಾನಿ ಎಂಬ ವ್ಯಕ್ತಿ ಟ್ವಿಟ್ಟರ್ನಲ್ಲಿ ಕಾಣೆಯಾದ ತನ್ನ ತಾಯಿಯನ್ನು ಹುಡುಕಲು ಸಹಾಯ ಮಾಡಿ ಎಂದು ಪ್ರಧಾನ ಮಂತ್ರಿ ಕಚೇರಿಗೆ ಮನವಿ ಮಾಡಿದ್ದರು. “ತನ್ನ ತಾಯಿ ಸಿಂಗಾಪುರದಿಂದ ರಾಯಲ್ ಕೆರೆಬಿಯನ್ ಕ್ರೈಸ್ನಲ್ಲಿ ಪ್ರಯಾಣಿಸುತ್ತಿದ್ದರು. ಹಡಗಿನಿಂದ ನಾಪತ್ತೆಯಾಗಿದ್ದಾರೆ. ಅವರು ಹಾರಿದ್ದಾರೆ ಎಂದು ಕ್ರೂಸ್ ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ನಮಗೆ ಯಾವುದೇ ದೃಶ್ಯವನ್ನು ತೋರಿಸುತ್ತಿಲ್ಲ” ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ಗೆ ಟ್ವಿಟ್ಟರ್ನಲ್ಲಿ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.
ಬಳಿಕ ಕ್ರೂಸ್ ಲೈನರ್ ಅಂತಿಮವಾಗಿ ತನ್ನೊಂದಿಗೆ ತುಣುಕನ್ನು ಹಂಚಿಕೊಂಡರು ಮತ್ತು ಅವರ ತಾಯಿ ಸತ್ತಿದ್ದಾರೆ ಎಂದು ದೃಢಪಡಿಸಿದರು ಎಂದಿದ್ದಾರೆ.
ಸ್ಟ್ರೈಟ್ ಟೈಮ್ಸ್ ವರದಿಯ ಪ್ರಕಾರ, ಅಪೂರ್ವ್ ಸಹಾನಿ ಅವರ ತಾಯಿ ರೀತಾ ಸಹಾನಿ ಅವರು ತಮ್ಮ ಪತಿ ಜಾಕೇಶ್ ಸಹಾನಿ ಅವರೊಂದಿಗೆ “ಸ್ಪೆಕ್ಟ್ರಮ್ ಆಫ್ ದಿ ಸೀಸ್” ಕ್ರೂಸ್ ಹಡಗಿನಲ್ಲಿ ಸಿಂಗಾಪುರಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.