News Karnataka Kannada
Friday, May 10 2024
ದೇಶ

ದೇಶದಲ್ಲಿ ‘ರಾಮನ ಅಲೆ’ ಇದೆಯೇ ಎಂಬ ಪ್ರಶ್ನೆಗೆ ರಾಗಾ ಕೊಟ್ಟ ಉತ್ತರವೇನು ?

ಜ.22ರಂದು ಹಲವು ದಶಕಗಳ ಕಾಲ ಭಾರತೀಯರು ಕಾದು ಕುಳಿತಿದ್ದ ರಾಮ ಮಂದಿರ‌ ಉದ್ಘಾಟನೆಯಾಗಿದೆ. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇವಿಧಿ ವಿಧಾನಗಳ ಮೂಲಕ ಬಾಲರಾಮನ ಪ್ರಾಣ ಪ್ರತಿಷ್ಠಾನ ನೆರವೇರಿಸಿದ್ದಾರೆ.
Photo Credit : News Kannada

ಅಸ್ಸಾಂ: ಜ.22ರಂದು ಹಲವು ದಶಕಗಳ ಕಾಲ ಭಾರತೀಯರು ಕಾದು ಕುಳಿತಿದ್ದ ರಾಮ ಮಂದಿರ‌ ಉದ್ಘಾಟನೆಯಾಗಿದೆ. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇವಿಧಿ ವಿಧಾನಗಳ ಮೂಲಕ ಬಾಲರಾಮನ ಪ್ರಾಣ ಪ್ರತಿಷ್ಠಾನ ನೆರವೇರಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ದೇಶ ವಿದೇಶದ ಗಣ್ಯರು, ಸಿನಿಮಾ ನಟರು, ಕ್ರೀಡಾ ದಿಗ್ಗಜರು ವಿವಿಧ ಕ್ಷೇತ್ರಗಳ ಸಾಧಕರು ಕೂಡ ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದೀಗ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ರಾಮ ಮಂದಿರದ ಬಗ್ಗೆ ಸಂಚಲನಕಾರಿ ಹೇಳಿಕೆ ನೀಡಿದ್ದರು.

ಮಂಗಳವಾರ ಅಸ್ಸಾಂನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು. ಇದರಲ್ಲಿ ಭಾರತ್​ ಜೋಡೋ ಯಾತ್ರೆ, ಅಸ್ಸಾಂನಲ್ಲಿ ತಮಗಾಗುತ್ತಿರುವ ತೊಡಕು, I.ಓ.ಆ.I.ಂ ಬ್ಲಾಕ್​ನಲ್ಲಿ ಯಾರು ಪ್ರಧಾನಿಯಾಗಲಿದ್ದಾರೆ ಎಂಬ ವಿಚಾರಗಳ ಕುರಿತು ಮಾತನಾಡಿದರು.

ಈ ವೇಳೆ ಪತ್ರಕರ್ತರೊಬ್ಬರು, ರಾಮ ಮಂದಿರ ಉದ್ಘಾಟನೆ ಬಳಿಕ ದೇಶದಲ್ಲಿ ರಾಮನ ಅಲೆ ಎದ್ದಿದೆ. ವಿಪಕ್ಷಗಳು ರಾಮನ ಅಲೆಯನ್ನು ಎದುರಿಸಲು ಯಾವ ರೀತಿಯ ಯೋಜನೆ ರೂಪಿಸಿಕೊಂಡಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಕಾಂಗ್ರೆಸ್ ನಾಯಕ, ಎಲ್ಲೂ ರಾಮನ ಅಲೆ ಎಂಬುದಿಲ್ಲ, ಅಯೋಧ್ಯೆಯಲ್ಲಿ ನಡೆದದ್ದು ಬಿಜೆಪಿಯವರ ಕಾರ್ಯಕ್ರಮ ಎಂದು ನಾನು ಮೊದಲೇ ಹೇಳಿದ್ದೇನೆ. ಅದೊಂದು ರಾಜಕೀಯ ಘಟನೆ, ಬಿಜೆಪಿ ಮತ್ತು ಮೋದಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಎಂದು ತಿಳಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು