ಚಂಡೀಗಢ: ಖಾಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಅವರನ್ನು ಜಲಂಧರ್ನ ನಕೋದರ್ ಬಳಿ ಬಂಧಿಸಲಾಗಿದೆ. ಪ್ರತ್ಯೇಕತಾವಾದಿ ನಾಯಕನ ವಿರುದ್ಧ ಪಂಜಾಬ್ ಪೊಲೀಸರು ಕ್ರಮ ಕೈಗೊಂಡ ಬಳಿಕ ಕೇಂದ್ರ ಸಚಿವಾಲಯ ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವರದಿಗಳು ತಿಳಿಸಿವೆ.
ಗಲಭೆಗಳು ಉಂಟಾಗಬಹುದು ಎಂಬ ಕಾರಣಕ್ಕೆ ಪಂಜಾಬ್ನ ಹಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವರದಿಗಳ ಪ್ರಕಾರ, ಅಮೃತಪಾಲ್ ಸಿಂಗ್ ಅವರ ಕನಿಷ್ಠ ಆರು ಸಹಚರರನ್ನು ಬಂಧಿಸಲಾಗಿದೆ.
ಮೂವತ್ತು ವರ್ಷದ ಅಮೃತಪಾಲ್ ಸಿಂಗ್, ಖಲಿಸ್ತಾನ್ ಪರ ಪ್ರಚಾರ ಮತ್ತು ಸಿಖ್ ಬೋಧಕ, ಭಾಷಣಗಳ ಮೂಲಕ “ಪ್ರತ್ಯೇಕತಾವಾದ” ಪ್ರಚಾರವನ್ನು ನಡೆಸುತ್ತಿದ್ದಾನೆ. ಫೆಬ್ರವರಿ 23 ರಂದು, ಅಮೃತಪಾಲ್ ಸಿಂಗ್ ನೇತೃತ್ವದ ಶಸ್ತ್ರಸಜ್ಜಿತ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿತ್ತು. ಅಮೃತಸರ ಬಳಿಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿತು. ಅಪಹರಣ ಪ್ರಕರಣದಲ್ಲಿ ಬಂಧನಕ್ಕೊಳಗಾದ ತಮ್ಮ ಸಹಚರನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿತು. ಈ ಘರ್ಷಣೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದರು.