ಕುಂದಾಪುರ: ಯಾವುದೇ ರೀತಿಯ ದಾಖಲಾತಿಗಳು ಇಲ್ಲದೆ ಅನಧಿಕೃತವಾಗಿ ಹಣವನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೈಂದೂರು ಪೊಲೀಸರು ಶಿರೂರು ಚೆಕ್ ಪೋಸ್ಟ್ ಬಳಿ ಪತ್ತೆ ಹಚ್ಚಿದ ಘಟನೆ ನಡೆದಿದೆ.
ನೊಂದಣಿ ಸಂಖ್ಯೆ ಇಲ್ಲದ ಕಾರು ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಸಾಗಿ ಬರುತ್ತಿದ್ದಾಗ ಶಿರೂರು ಚೆಕ್ ಪೋಸ್ಟ್ ಬಳಿ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಕಾರಿನ ಸೀಟಿನ ಕೆಳಗಡೆ ಪ್ಲಾಸ್ಟಿಕ್ ಚೀಲವಿರುವುದು ಕಂಡು ಬಂದಿದೆ. ಚೀಲವನ್ನು ಬಿಡಿಸಿ ನೋಡಿದಾಗ 20 ಲಕ್ಷ.ರೂ ಪತ್ತೆ ಆಗಿದೆ.ಹಣ ಸಾಗಾಟದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದ ಕಾರಣ ಹಣವನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ.
ಕಾರಿನಲ್ಲಿದ್ದ ವ್ಯಕ್ತಿಯನ್ನು ವಶ ತೆಗೆದುಕೊಳ್ಳಲಾಗಿದೆ.ಈ ಸಂಬಂಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಂದೂರು ಠಾಣೆಯ ಠಾಣಾಧಿಕಾರಿ ನಿರಂಜನ ಗೌಡ ಮತ್ತು ತಂಡದವರು ಕಾರ್ಯಾಚರಣೆಯನ್ನು ನಡೆಸಿದ್ದರು.