News Karnataka Kannada
Sunday, May 05 2024
ದೇಶ

ಖಾಲಿಸ್ತಾನಿ ಭಯೋತ್ಪಾದಕನಿಗೆ ಸೇರಿದ ಸ್ಥಿರಾಸ್ತಿ ಎನ್‌ಐಎ ವಶಕ್ಕೆ

New Project (1)
Photo Credit :

ನವದೆಹಲಿ: ಪಂಜಾಬ್‌ನ ಫೆರೋಜ್‌ಪುರದಲ್ಲಿರುವ, ಖಾಲಿಸ್ತಾನಿ ಉಗ್ರ ರಾಮ್‌ದೀಪ್‌ ಸಿಂಗ್‌ಗೆ ಸೇರಿದ ಸ್ಥಿರಾಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಮುಟ್ಟುಗೋಲು ಹಾಕಿಕೊಂಡಿದೆ.‌

‘ಎನ್‌ಐಎ ನ್ಯಾಯಾಲಯದ ನಿರ್ದೇಶನದ ಅನ್ವಯ ಆರೋಪಿಗೆ ಸಂಬಂಧಿಸಿದ, ಝೋಕ್‌ ನೋದ್‌ ಗ್ರಾಮದಲ್ಲಿದ್ದ ಸುಮಾರು 4.5 ಎಕರೆಯಷ್ಟು ಜಾಗವನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

‘ಖಾಲಿಸ್ತಾನ ಪರ ಭಯೋತ್ಪಾದಕ ಸಂಘಟನೆಗಳಾದ ಖಾಲಿಸ್ತಾನ ಲಿಬರೇಷನ್‌ ಫ್ರಂಟ್ (ಕೆಎಲ್‌ಎಫ್‌), ಬಾಬರ್‌ ಖಾಲ್ಸಾ ಇಂಟರ್‌ನ್ಯಾಷನಲ್‌ (ಬಿಕೆಐ) ಮತ್ತು ಅಂತರರಾಷ್ಟ್ರೀಯ ಸಿಖ್‌ ಯುವ ಘಟಕದ (ಐಎಸ್‌ವೈಎಫ್‌) ನಾಯಕರು ಮತ್ತು ಸದಸ್ಯರ ಜತೆ ನಂಟು ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿ ರಾಮ್‌ದೀಪ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದೆ.

2023 ಜುಲೈ 27ರಂದು ನ್ಯಾಯಾಲಯವು ರಾಮ್‌ದೀಪ್‌ನನ್ನು ಅಪರಾಧಿಯೆಂದು ಘೋಷಿಸಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು