ಮಹಾರಾಷ್ಟ್ರ: ಕರ್ನಾಟಕದಲ್ಲಿ ಹುಲಿ ಉಗುರಿನ ಚರ್ಚೆ ಕಡಿಮೆಯಾಗುತ್ತಿದ್ದಂತೆ ಮಾಹಾರಾಷ್ಟ್ರದಲ್ಲಿ ವ್ಯಾಘ್ರದಂತದ ಸದ್ದು ಶುರುವಾಗಿದೆ.
ಛತ್ರಪತಿ ಶಿವಾಜಿ ಜನ್ಮದಿನದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ವಿದರ್ಭದ ಬುಲ್ಧಾನಾ ಕ್ಷೇತ್ರದ ಶಾಸಕ ಸಂಜಯ್ ಗಾಯಾಕ್ವಾಡ್, ತಮ್ಮ ಕುತ್ತಿಗೆಯಲ್ಲಿದ್ದ ಹುಲಿ ಹಲ್ಲಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ʼ೩೭ ವರ್ಷಗಳ ಹಿಂದೆ ಕೊಂದ ಹುಲಿಯ ಉಗುರನ್ನು ಕುತ್ತಿಗೆಗೆ ಹಾಕಿಕೊಂಡಿದ್ದೇನೆʼ ಎಂದರು.
ಇದರ ವೀಡಿಯೋವನ್ನು ಶಿವಸೇನೆಯ ಮುಖವಾಣಿ ಸಾಮ್ನಾದ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
೧೯೮೭ರಲ್ಲೂ ಹುಲಿ ಬೇಟೆ ಕ್ರಮಿನಲ್ ಅಪರಾಧವಾಗಿತ್ತು. ಅದರ ಬಗ್ಗೆ ಸ್ಪಷ್ಟನೆ ಕೇಳಲು ಕರೆ ಮಾಡಿದರೆ ಗಾಯಕ್ವಾಡ್ ಉತ್ತರಿಸುತ್ತಿಲ್ಲ.
ಈ ಮೊದಲು ಹುಲಿ ಉಗುರಿನ ಲಾಕೆಟ್ ಧರಿಸಿದ್ದಕ್ಕಾಗಿ ಬಿಗ್ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಬಂಧನವಾಗಿತ್ತು.