ಮುಂಬೈ: ಬೈಕುಲ್ಲಾದಲ್ಲಿ ಗುರುವಾರ ಬೃಹತ್ ಮರವೊಂದು ಗುಡಿಸಲಿನ ಮೇಲೆ ಬಿದ್ದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಬಿಎಂಸಿ ವಿಪತ್ತು ನಿಯಂತ್ರಣ ಇಲಾಖೆ ತಿಳಿಸಿದೆ.
ಹಂಸರಾಜ್ ಲೇನ್ ನ ಇಂದೂ ಆಯಿಲ್ ಮಿಲ್ ಕಾಂಪೌಂಡ್ ನಲ್ಲಿ ಮುಂಜಾನೆ 2.30 ರ ಸುಮಾರಿಗೆ ಈ ಘಟನೆ ನಡೆದಿದೆ.
ರೆಹಮಾನ್ ಖಾನ್ (22) ಸಾವನ್ನಪ್ಪಿದ್ದರೆ, ರಿಜ್ವಾನ್ ಖಾನ್ (20) ಅವರನ್ನು ಹತ್ತಿರದ ಸರ್ ಜೆಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮುಂಬೈನಲ್ಲಿ ಮರ ಬಿದ್ದ ಪರಿಣಾಮ ಇದು ಮೂರನೇ ಸಾವು, ಸೋಮವಾರದಿಂದ ನಗರದಲ್ಲಿ ಧಾರಾಕಾರ ಮಳೆಯಿಂದಾಗಿ ಮಲಾಡ್ ಮತ್ತು ಗೋರೆಗಾಂವ್ ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.