ಮಹಾರಾಷ್ಟ್ರ: ಪುಣೆಯ ವ್ಯಕ್ತಿ ನಡೆಸುತ್ತಿರುವ ಹಿಂದೂ ಧರ್ಮದ ಕುರಿತಾದ ಸಂಗತಿಗಳಿಗೆ ಮೀಸಲಾದ ವೆಬ್ಸೈಟ್ಗೆ ‘ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಪ್ರಧಾನಿ ನರೇಂದ್ರ ಮೋದಿ’ಯನ್ನು ಕೊಲ್ಲುವುದಾಗಿ ವ್ಯಕ್ತಿಯೊಬ್ಬರಿಂದ ಕಾಮೆಂಟ್ ಬಂದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಆಗಸ್ಟ್ 6ರಂದು ವೆಬ್ಸೈಟಿನಲ್ಲಿ ಕಾಮೆಂಟ್ ಮಾಡಿರುವ ಎಂಎ ಮೊಖೀಂ ಎಂಬ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಇಲ್ಲಿನ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಅಧಿಕಾರಿಯ ಪ್ರಕಾರ, ದುಧಾನೆ ಅವರು ತಮ್ಮ ವೆಬ್ಸೈಟ್ ಅನ್ನು ಪರಿಶೀಲಿಸುವಾಗ, ಎಂಎ ಮೊಖೀಂ ಎಂಬ ಹೆಸರಿನ ವ್ಯಕ್ತಿ, ‘ನಾನು ಭಾರತದಲ್ಲಿ ಗಂಭೀರವಾದ ಬಾಂಬ್ ಸ್ಫೋಟವನ್ನು ಯೋಜಿಸುತ್ತಿದ್ದೇನೆ. ನಾನು ಭಯೋತ್ಪಾದಕ ಸಂಘಟನೆಗಳಿಗೆ ಹಣ ನೀಡುತ್ತೇನೆ. ನಾನು ಹಿಂದೂ ಧರ್ಮವನ್ನು ನಾಶಪಡಿಸುತ್ತೇನೆ. ನಾನು ಪ್ರಧಾನಿ ನರೇಂದ್ರ ಮೋದಿಯನ್ನು ಕೂಡ ಕೊಲ್ಲುತ್ತೇನೆ’ ಎಂದು ಕಾಮೆಂಟ್ ಮಾಡಿರುವುದು ಕಂಡುಬಂದಿದೆ.