ಮುಂಬೈ: ಮಳೆಯ ಕೊರತೆಯಿಂದ ಕಬ್ಬು ಇಳುವರಿ ಕಡಿಮೆಯಾಗಿದೆ. ಇದೇ ಕಾರಣದಿಂದ ಸಕ್ಕರೆ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈಗಾಗಲೇ ಭಾರತದಿಂದ ಈರುಳ್ಳಿ, ಅಕ್ಕಿ ರಫ್ತಿಗೆ ನಿರ್ಬಂಧ ಹೇರಲಾಗಿದ್ದು, ಹೆಚ್ಚುವರಿಯಾಗಿ ಇದೀಗ ಸಕ್ಕರೆ ಮೇಲೆ ಕೂಡ ರಫ್ತು ನಿರ್ಬಂಧ ಹೇರುವ ಸಾಧ್ಯತೆ ಇದೆ. ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಸಕ್ಕರೆ ಲಭ್ಯವಿಲ್ಲದ ಕಾರಣ ನ್ಯೂಯಾರ್ಕ್ ಮತ್ತು ಲಂಡನ್ನಲ್ಲಿ ಬೆಲೆ ಏರುವ ಸಾಧ್ಯತೆ ಇದೆ.
ಅಲ್ಲದೆ ಹಣದುಬ್ಬರ ಏರಿಕೆಯಾಗಲಿದೆ. “ನಮ್ಮ ಪ್ರಾಥಮಿಕ ಗಮನವು ಸ್ಥಳೀಯ ಸಕ್ಕರೆಯ ಅವಶ್ಯಕತೆಗಳನ್ನು ಪೂರೈಸುವುದು. ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಅನ್ನು ಉತ್ಪಾದಿಸುವುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ ಋತುವಿನಲ್ಲಿ, ರಫ್ತು ಕೋಟಾಗಳಿಗೆ ನಿಯೋಜಿಸಲು ನಮಗೆ ಸಾಕಷ್ಟು ಸಕ್ಕರೆ ಲಭ್ಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.