News Karnataka Kannada
Friday, May 03 2024
ಮಹಾರಾಷ್ಟ್ರ

ಲಂಚ ಪಡೆಯುತಿದ್ದಾಗಲೇ ಸಿಕ್ಕಿ ಬಿದ್ದ ಮುಂಬೈ ಡಿವೈಎಸ್‌ಪಿ

Acb Mumbai
Photo Credit :

 

ಮುಂಬೈ, : ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್‌ ದೇಶ್‌ ಮುಖ್‌ ಅವರು ಪೋಲೀಸರು ತಿಂಗಳಿಗೆ ನೂರು ಕೋಟಿ ರೂಪಾಯಿ ಸಂಗ್ರಹಿಸಿ ಕೊಡಬೇಕೆಂದು ಬೇಡಿಕೆ ಯಿಟ್ಟಿದ್ದ ವಿಚಾರಕ್ಕೆ ಸಂಬಂದಿಸಿದಂತೆ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಇದೀಗ ವ್ಯಕ್ತಿಯೊಬ್ಬರನ್ನು ಬೆದರಿಸಿ ಬಲವಂತವಾಗಿ ಲಂಚ ಪಡೆಯುತ್ತಿದ್ದ ಡಿವೈಎಸ್‍ಪಿ ಮತ್ತು ಅವರ ಸಹೋದ್ಯೋಗಿಯನ್ನು ಮಹಾರಾಷ್ಟ್ರ ಭಷ್ಟ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಪರ್ಭಣಿಯ ಸೆಲುವಿನ ಉಪವಿಭಾಗ ಪೊಲೀಸ್ ಅಧಿಕಾರಿಯಾಗಿರುವ ಡಿವೈಎಸ್‍ಪಿ ರಾಜೇಂದ್ರ ಪಾಲ್ (55) ಮತ್ತವರ ಸಹೋದ್ಯೋಗಿಯನ್ನು ಬಂಧಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಿನಲ್ಲಿ ಅಪಘಾತವೊಂದು ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮೃತಪಟ್ಟ ವ್ಯಕ್ತಿಯ ಪತ್ನಿ ಜೊತೆ ದೂರುದಾರ ಸಂಭಾಷಣೆ ನಡೆಸಿರುವ ಆಡಿಯೋ ಕ್ಲಿಪ್ ಇತ್ತೀಚೆಗೆ ಬೆಳಕಿಗೆ ಬಂಧಿತ್ತು. ಅದನ್ನು ಮುಂದಿಟ್ಟುಕೊಂಡು ಡಿವೈಎಸ್‍ಪಿ ಪಾಲ್ ದೂರುದಾರರನ್ನು ಸಂಪರ್ಕಿಸಿದರು. ಆಡಿಯೋ ಕ್ಲಿಪ್ ಆಧರಿಸಿ ಮುಂದಿನ ತನಿಖೆ ನಡೆದಿರಲು ಮತ್ತು ಕ್ರಮ ಕೈಗೊಳ್ಳದಿರಲು ಎರಡು ಕೋಟಿ ಹಣ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದರು.
ಪದೇ ಪದೇ ಕರೆ ಮಾಡಿ ಬೆದರಿಕೆ ಹಾಕಿದ್ದರು. ನನ್ನ ಬಳಿ ಅಷ್ಟ ಹಣ ಇಲ್ಲ ಎಂದು ದೂರುದಾರರು ಹೇಳಿದಾಗ ಚೌಕಾಸಿ ನಡೆದು ಒಂದುವರೆ ಕೋಟಿಗೆ ಒಪ್ಪಂದವಾಗಿತ್ತು. ಅದರ ಮೊದಲ ಕಂತಿನ 10 ಲಕ್ಷ ರೂಪಾಯಿಯನ್ನು ಡಿವೈಎಸ್‍ಪಿ ತಮ್ಮ ಸಹೋದ್ಯೋಗಿ ಮೂಲಕ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಲೆ ಬೀಸಿ ಸ್ಥಳದಲ್ಲೇ ಹಿಡಿದು ಹಾಕಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು