ನಾಂದೇಡ್; ಬಿಜೆಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದೊಡ್ಡ ಸಾಧನೆ ಮಾಡಿದೆ. ದೇಗ್ಲೂರು ಬಿಲೋಲಿ ಕ್ಷೇತ್ರದ ಜನರು ಬಿಜೆಪಿಯನ್ನು ಬೆಂಬಲಿಸಿ ಅಬ್ನೆ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು”ಎಂದು ಮಾಜಿ ಸಚಿವ ಬಿಜೆಪಿಯ ಬಬನ್ರಾವ್ ಲೋನಿಕಾರ್ ಹೇಳಿದ್ದಾರೆ.
ನಾಂದೇಡ್ ಜಿಲ್ಲೆಯಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಅದೇ ರೀತಿ “ನಮ್ಮೊಂದಿಗೆ ಶಿವಸೇನೆಯ 12 ಶಾಸಕರು ಸಂಪರ್ಕದಲ್ಲಿದ್ದಾರೆ”
ಎಂದು ಹೇಳಿದ್ದಾರೆ.
ಸಬ್ನೆ ಅವರು ಬಿಜೆಪಿಗೆ ಸೇರುವ ಮುನ್ನವೇ ದೇಗ್ಲೂರು ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಶಿವಸೇನೆಯ ಮಾಜಿ ಶಾಸಕ ಸಬ್ನೆ ಅವರ ಹೆಸರನ್ನು ಘೋಷಣೆ ಮಾಡಲಾಯಿತು.
ನಾಂದೇಡ್ ಜಿಲ್ಲೆಯಲ್ಲಿ ದೇಗ್ಲೂರು ಬಿಲೋಲಿ ವಿಧಾನಸಭಾ ಉಪಚುನಾವಣೆ ಶೀಘ್ರವೇ ನಡೆಯಲಿದೆ. ಈ ಚುನಾವಣೆಗೆ ಬಿಜೆಪಿಯ ಸುಭಾಷ್ ಸಬ್ನೆ ಅವರನ್ನು ಅಭ್ಯರ್ಥಿಯನ್ನಾಗಿ ನೇಮಕ ಮಾಡಿದೆ.