News Karnataka Kannada
Saturday, April 27 2024
ಮಧ್ಯ ಪ್ರದೇಶ

ಮುಸ್ಲಿಂ ಯುವಕನ ಮನೆ ನೆಲಸಮ; ಮೆರವಣಿಗೆಯ ಮೇಲೆ ಉಗುಳಿದ್ದಕ್ಕೆ ಕ್ರಮ

ಬಾಬಾ ಮಹಾಕಾಲ್ ಮೆರವಣಿಗೆ ಸಾಗುತ್ತಿದ್ದ ವೇಳೆ ಮನೆ ಮೇಲೆ ನಿಂತು ಎಂಜಲು ಉಗುಳಿದ್ದ ೧೮ ವರ್ಷದ ಯುವಕ ಅದ್ನಾನ್ ಮನ್ಸೂರಿಯ ಮನೆಯನ್ನು ಕೆಡವಲಾಗಿದೆ.
Photo Credit : News Kannada

ಉಜ್ಜಯಿನಿ: ಬಾಬಾ ಮಹಾಕಾಲ್ ಮೆರವಣಿಗೆ ಸಾಗುತ್ತಿದ್ದ ವೇಳೆ ಮನೆ ಮೇಲೆ ನಿಂತು ಎಂಜಲು ಉಗುಳಿದ್ದ ೧೮ ವರ್ಷದ ಯುವಕ ಅದ್ನಾನ್ ಮನ್ಸೂರಿಯ ಮನೆಯನ್ನು ಕೆಡವಲಾಗಿದೆ.

೧೫೧ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಅದ್ನಾನ್ ನ ಮನೆಯನ್ನು ಇದೀಗ ಬುಲ್ಡೋಜರ್ ನಿಂದ ನೆಲಸಮಗೊಳಿಸಲಾಗಿದೆ. ೫ ತಿಂಗಳ ಜೈಲುವಾಸದ ಬಳಿಕ ಆತನಿಗೆ ಜಾಮೀನು ದೊರೆತಿದ್ದು, ಪ್ರತ್ಯಕ್ಷದರ್ಶಿ ಆತನನ್ನು ಗುರುತಿಸಲು ನಿರಾಕರಿಸಿದರು.

ಜುಲೈ ೧೭ರಂದು ಉಜ್ಜಯಿನಿಯಲ್ಲಿ ಬಾಬಾ ಮಾಹಾಕಾಲ್ ಮೆರವಣಿಗೆ ಸಾಗುತ್ತಿದ್ದ ವೇಳೆ ಮೇಲಿನಿಂದ ಯಾರೋ ಉಗುಳಿದ್ದಾರೆಂದು ಭಕ್ತರು ದೂರಿದ್ದರು. ಅಶ್ರಫ್ ಹುಸೇನ್ ರ ಇಬ್ಬರು ಮಕ್ಕಳು ಮತ್ತು ಇತರರು ಛಾವಣಿಯ ಮೇಲಿನಿಂದ ಭಕ್ತರ ಮೇಲೆ ಉಗುಳಿದ್ದಾರೆ ಎಂದು ಸಾವನ್ ಲೋಟ್ ಎಂಬ ವ್ಯಕ್ತಿ ಆರೋಪಿಸಿದ್ದರು. ಈ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿ ಮೂವರ ವಿರುದ್ಧ ೫ ಸೆಕ್ಷನ್ ಗಳ ಅಡಿಯಲ್ಲಿ FIR ದಾಖಲಿಸಲಾಗಿತ್ತು.

ಇಂದೋರ್‌ನ ಮಧ್ಯಪ್ರದೇಶ ಹೈಕೋರ್ಟ್‌ನ ಏಕಸದಸ್ಯ ಪೀಠ ಕಳೆದ ಸೋಮವಾರ ಅದ್ನಾನ್ ಗೆ ಜಾಮೀನು ನೀಡಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಖಾರಾ ಕುವಾನ್ ಠಾಣೆಯ ಪೊಲೀಸರು ಮಹಾಕಾಲ್ ಮೆರವಣಿಗೆಯ ಮೇಲೆ ಉಗುಳಿರುವ ಬಗ್ಗೆಯಷ್ಟೇ ನಮಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು