ಭೋಪಾಲ್: ಜಲಾಶಯಕ್ಕೆ ಬಿದ್ದ ನಾಯಿಯನ್ನು ರಕ್ಷಿಸಲು ಹೋಗಿ ಯುವಕನೊಬ್ಬ ನೀರುಪಾಲಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮೃತನನ್ನು ೨೩ ವರ್ಷದ ಸರಳ್ ನಿಗಮ್ ಎಂದು ಗುರುತಿಸಲಾಗಿದೆ.
ಗೆಳತಿಯರೊಂದಿಗೆ ಕೇರ್ವಾ ಜಲಾಶಯದ ಬಳಿ ತಿರುಗಾಡಲು ಹೋಗಿದ್ದ ಸರಳ್, ಸ್ನೇಹಿತೆಯ ಶ್ವಾನ ನೀರಿಗೆ ಬಿದ್ದದ್ದನ್ನು ಕಂಡು ಅದನ್ನು ರಕ್ಷಿಸಲು ನೀರಿಗೆ ಧುಮುಕಿದ್ದ. ಬಳಿಕ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿದವನು ಶವವಾಗಿ ಪತ್ತೆಯಾಗಿದ್ದಾನೆ.
ಸುಧೀರ್ ನಿಗಮ್ ದಂಪತಿಯ ಏಕೈಕ ಕುವರನಾಗಿದ್ದ ಸರಳ್ ಎನ್ಐಟಿಯಲ್ಲಿ ಬಿಟೆಕ್ ಪದವೀಧರನಾಗಿದ್ದು, ಯುಪಿಎಸ್ಸಿ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.