ಮಧ್ಯಪ್ರದೇಶ : ಗಣೇಶ ವಿಸರ್ಜನೆಗೆ ಹೋದ ಒಂದು ಹಸುಗೂಸು ಸೇರಿ 10 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶ ಪ್ರತ್ಯೇಕ ಕಡೆಗಳಲ್ಲಿ ನಡೆದಿದೆ.
ಭಿಂಡ್ನ ಟಾಕಿಂಗ್ ಬಳಿಯಿರುವ ಕೊಳದಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಮೃತ ಮಕ್ಕಳನ್ನು ಅಭಿಷೇಕ್ ಕುಶ್ವಾಹ, ಸಚಿನ್ ರಾಜಾವತ್, ಹರ್ಷಿತ್ ರಾಜಾವತ್, ಪ್ರಶಾಂತ್ ಕುಶ್ವಾಹ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸುಮಾರು 12 ರಿಂದ 13 ವರ್ಷದವರಾಗಿದ್ದಾರೆ. ಶವಗಳನ್ನು ಹೊರತೆಗೆಯಲಾಗಿದೆ.
ಸತ್ನಾ ಜಿಲ್ಲೆಯ ಜುರಾ ಗ್ರಾಮದ ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಮೃತ ಮಕ್ಕಳು 8 ರಿಂದ 10 ವರ್ಷ ವಯಸ್ಸಿನವರು ಎನ್ನಲಾಗಿದೆ. ರಾಜ್ಘರ್ನಲ್ಲಿ ಒಂದು ಹಸುಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.
ಇನ್ನು 17 ವರ್ಷದ ಬ್ರಾಜ್ ಸಿಂಗ್ ರಾಜ್ಘರ್ದ ಕಚರಿಯಾ ಗ್ರಾಮದಲ್ಲಿಗಣೇಶ ವಿಸರ್ಜನೆ ವೇಳೆ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ರಾಜ್ಘರ್ನಲ್ಲಿ ಒಂದು ಹಸುಗೂಸು ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ದುರಂತ ಸ್ಥಳಗಳಿಗೆ ಶಾಸಕ ನಾರಾಯಣ್ ತ್ರಿಪಾಠಿ, ಎಸ್ ಡಿಒಪಿ ಹಿಮಾಲಿ ಸೋನಿ ಮತ್ತು ಎಸ್ ಡಿಎಂ ಧೀರೇಂದ್ರ ಮಿಶ್ರಾ ಭೇಟಿ ನೀಡಿದ್ದಾರೆ.