ಕೋಯಿಕ್ಕೋಡ್: ಮೊನ್ನೆ ಮೊನ್ನೆಯಷ್ಟೇ ಕೇರಳ- ಕರ್ನಾಟಕದ ಗಡಿ ಭಾಗಗಳಲ್ಲಿ ಮವೋವಾದಿಗಳು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಹಲವು ನಕ್ಸಲರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಹೊರಬಂದಿತ್ತು. ಇದೀಗ ಕೇರಳದಲ್ಲಿ ಮಾವೋವಾದಿಗಳ ವಿರುದ್ಧ ನಡೆಯುತ್ತಿರುವ ಪೊಲೀಸ್ ಕಾರ್ಯಾಚರಣೆ ನಿಲ್ಲಿಸದಿದ್ದಲ್ಲಿ ಫೇಕ್ ಕಾಮ್ರೇಡ್ಸ್ ಹಮಾಸ್ ರ್ಯಾಲಿಯನ್ನು ಸ್ಫೋಟಿಸುವುದಾಗಿ ಭಾರತೀಯ ಕಮ್ಯುನಿಷ್ಟ್ ಪಾರ್ಟಿ(ಮಾವೋವಾದಿ) ಕೋಯಿಕ್ಕೋಡ್ ಜಿಲ್ಲಾಧಿಕಾರಿಗೆ ಬೆದರಿಕೆ ಪತ್ರ ಕಳುಹಿಸಿದೆ. ಸರ್ಕಾರ ಕೋಯಿಕ್ಕೋಡ್ ಜಿಲ್ಲೆಯ ಅಗತ್ಯತೆಗಳನ್ನು ಪೂರೈಸುವುದನ್ನು ಬಿಟ್ಟು ವಿದೇಶಿ ಭಯೋತ್ಪಾದಕರಿಗಾಗಿ ರಾಲಿಯನ್ನು ಆಯೋಜಿಸುತ್ತಿರುವುದನ್ನು ತೀವ್ರವಾಗಿ ಪತ್ರದಲ್ಲಿ ಆಕ್ಷೇಪಿಸಿದೆ.
ನಮ್ಮ ವಿರುದ್ಧ ಕಾರ್ಯಾಚರಣೆ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸುವುದನ್ನು ಸರ್ಕಾರ ನಿಲ್ಲಿಸದಿದ್ದರೆ ಕೊಚ್ಚಿ ಪ್ರಾರ್ಥನಾ ಮಂದಿರದಲ್ಲಿ ಆಗಿದ್ದೇ ಹಮಾಸ್ ರಾಲಿ ಸಂದರ್ಭ ಆಗುತ್ತದೆ ಎಂದು ಮಾವೋವಾದಿಗಳು ಎಚ್ಚರಿಕೆ ನೀಡಲಾಗಿದೆ.