ಕೇರಳ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಇಂದಿನಿಂದ ಐದು ದಿನ ತಿಂಗಳ ಪೂಜೆಗಾಗಿ ತೆರೆದಿದೆ. ಹೀಗಾಗಿ, ಭಕ್ತರೂ ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಬಹುದು ಎಂದು ಕೇರಳ ಸರ್ಕಾರ ತಿಳಿಸಿದೆ.
ಶಬರಿಮಲೆಗೆ ಮಾಸಿಕ ಪೂಜಾ ಸಮಯದಲ್ಲಿ ಭೇಟಿ ನೀಡುವ ಭಕ್ತರು ವರ್ಚ್ಯುಯಲ್ ಕ್ಯೂ ವ್ಯವಸ್ಥೆಯ ಮೂಲಕ ತಮ್ಮ ಸ್ಲಾಟ್ ಬುಕ್ಕಿಂಗ್ ಮಾಡಿಕೊಳ್ಳಬೇಕು. ನಂತರ ಶಬರಿಮಲೆಗೆ ಆಗಮಿಸಿ ಅಲ್ಲಿನ ಕಿಯೋಸ್ಕ್ಗಳಲ್ಲಿ ಸಂಬಂಧಪಟ್ಟ ಪ್ರವೇಶ ಮಾಹಿತಿಯನ್ನು ಪಡೆಯಬಹುದು ಎಂದು ಕೇರಳ ಸರ್ಕಾರ ತಿಳಿಸಿದೆ.
ಇನ್ನು ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದ್ದರೂ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ. ಹೀಗಾಗಿ ಶಬರಿಮಲೆ ಮಾಸಿಕ ಪೂಜೆಯ ಸಂದರ್ಭದಲ್ಲಿ ಭೇಟಿ ನೀಡುವ ಭಕ್ತರಿಗೆ ಯಾವುದೇ ನಿಯಮಗಳನ್ನು ಹೇರಿ ಇಲ್ಲ ಎಂದು ತಿಳಿಸಿದ್ದಾರೆ.