ತಿರುವನಂತಪುರಂ: ಕೇರಳದ ಆಡಳಿತಾರೂಢ ಎಲ್ಡಿಎಫ್ ಎರಡನೇ ವಾರ್ಷಿಕೋತ್ಸವವನ್ನು ಶನಿವಾರ ಆಚರಿಸಿದರೆ, ಪ್ರತಿಪಕ್ಷಗಳು ಕಪ್ಪು ದಿನವಾಗಿ ಆಚರಿಸಿ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, ವಿಜಯನ್ ಅವರ ದುರಾಡಳಿತದಿಂದ ಕೇರಳ ಅತಿ ಹೆಚ್ಚು ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯವಾಗಿದೆ.
”ರಾಜ್ಯ ಸರ್ಕಾರ ಜನರ ಮೇಲೆ 5,000 ಕೋಟಿ ರೂ. ಹೊರೆ ಹೊರಿಸಿದ್ದರೂ, ಮುಖ್ಯಮಂತ್ರಿ ವಿಜಯನ್ ಅವರು ವಾರ್ಷಿಕೋತ್ಸವವನ್ನು ಆಚರಿಸಲು ಪತ್ರಿಕೆ, ಟಿವಿ ಚಾನೆಲ್ಗಳಿಗೆ ಜಾಹೀರಾತುಗಳನ್ನು ನೀಡುವ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದಾರೆ. “ವಿಜಯನ್ ಸರ್ಕಾರವು ತೆರಿಗೆ ಸಂಗ್ರಹಣೆಯಲ್ಲಿ ವಿಫಲವಾಗಿದೆ. ರಾಜ್ಯದ ಖಜಾನೆ ಬತ್ತಿ ಹೋಗಿದೆ ಎಂದು ಸತೀಶನ್ ಆರೋಪಿಸಿದರು.
ಈ ಮಧ್ಯೆ ವಿಜಯನ್ ಅವರು ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಮಾಧ್ಯಮಗಳಲ್ಲಿ ಹಲವಾರು ಜಾಹೀರಾತು ನೀಡಿದ್ದು, ತಮ್ಮ ಸರ್ಕಾರವು ‘ನವ ಕೇರಳ’ ನಿರ್ಮಾಣದಲ್ಲಿ ಅತ್ಯುತ್ತಮ ಹೆಜ್ಜೆ ಇರಿಸಿದೆ ಎಂದು ಹೇಳಿದ್ದಾರೆ.