News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಯೂತ್ ಸೆಂಟರ್ ವತಿಯಿಂದ ಯಕ್ಷಗಾನ ನೃತ್ಯ ಕಲಿಕಾ ಶಿಬಿರ

Yakshagana Dance Learning Camp organized by Youth Centre
Photo Credit : By Author

ಮಂಗಳೂರು: ಯೂತ್ ಸೆಂಟರ್ (ರಿ)ಪಡೀಲ್ ಇದರ 54ನೇ ವಾರ್ಷಿಕೋತ್ಸವವು ದಿನಾಂಕ 22.10.2022 ರಂದು ಪಡೀಲ್ ದರ್ಬಾರ್ ಗುಡ್ಡೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯೂತ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಯಕ್ಷಗಾನ ನೃತ್ಯ ಕಲಿಕಾ ಶಿಬಿರದಲ್ಲಿ  ಚಂದ್ರಶೇಖರ ಬನಾರಿ ಅವರ ಸಾರಥ್ಯದಲ್ಲಿ ಯಕ್ಷಗಾನ ಕಲೆಯನ್ನು ಅರ್ಜಿಸಿದ ವಿದ್ಯಾರ್ಥಿಗಳು ಮಹಿಷ ವಧೆ ಎಂಬ ಪ್ರಸಂಗವನ್ನು ಆಡಿ ತೋರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷ  ವಿಜಯಕುಮಾರ್ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಧಾಕರ್ ರಾವ್ ಎಎಸ್ಐ, ಕದ್ರಿ ಪೊಲೀಸ್ ಠಾಣೆ, ಮೇಜರ್ ವಿಜಯಚಂದ್ರ,  ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಶ್ರೀಮತಿ ಶೋಭಾ ಪೂಜಾರಿ,  ರಾಜ ಕೆ ಕೋಟ್ಯಾನ್ ಗೌರವಾಧ್ಯಕ್ಷರು ಯೂತ್ ಸೆಂಟರ್ (ರಿ) ಪಡೀಲ್ ಸೆಂಟರ್ ಮಹಿಳಾ ಮಂಡಲ,  ಉದಯ್ ಕೆಪಿ, ಅಧ್ಯಕ್ಷರು ಯೂತ್ ಸೆಂಟರ್ (ರಿ) ಪಡೀಲ್ ಯೂತ್ ಸೆಂಟರ್ ಮಹಿಳಾ ಮಂಡಲ ಇವರು ವಹಿಸಿದ್ದರು.

ಈ ಸಂದರ್ಭದಲ್ಲಿ ಮೇಜರ್ ವಿಜಯಚಂದ್ರ ನಿವೃತ್ತ ಸೈನಿಕರು, ಭಾರತೀಯ ಭೂಸೇನೆ, ಚಂದ್ರಶೇಖರ ಬನಾರಿ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು, ದೀನ್ ರಾಜ್ ಕಳವಾರು ಭಜಕ ಸಾಧಕ ಪ್ರಶಸ್ತಿ ಪುರಸ್ಕೃತರು, ಗಂಗಾಧರ ಶೆಟ್ಟಿಗಾರ್ ಸಂಸ್ಥಾಪಕರು ಪ್ರಸಾದನ ಸಂಸ್ಥೆ ಮೋಹಿನಿ ಕಲಾಸಂಪದ ಕಿನ್ನಿಗೋಳಿ ಇವರನ್ನು ಸನ್ಮಾನಿಸಲಾಯಿತು. ಸುಧೀರ್ ಪಿ ಸ್ವಾಗತಿಸಿದರು ಉದಯಕುಮಾರ್ ಪ್ರಸ್ತಾವಿಸಿದರು, ಧನಂಜಯ ಶೆಟ್ಟಿ ವಂದಿಸಿದರು. ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು