ಮಂಗಳೂರು: ಯೂತ್ ಸೆಂಟರ್ (ರಿ)ಪಡೀಲ್ ಇದರ 54ನೇ ವಾರ್ಷಿಕೋತ್ಸವವು ದಿನಾಂಕ 22.10.2022 ರಂದು ಪಡೀಲ್ ದರ್ಬಾರ್ ಗುಡ್ಡೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಯೂತ್ ಸೆಂಟರ್ ವತಿಯಿಂದ ಆಯೋಜಿಸಲಾಗಿದ್ದ ಯಕ್ಷಗಾನ ನೃತ್ಯ ಕಲಿಕಾ ಶಿಬಿರದಲ್ಲಿ ಚಂದ್ರಶೇಖರ ಬನಾರಿ ಅವರ ಸಾರಥ್ಯದಲ್ಲಿ ಯಕ್ಷಗಾನ ಕಲೆಯನ್ನು ಅರ್ಜಿಸಿದ ವಿದ್ಯಾರ್ಥಿಗಳು ಮಹಿಷ ವಧೆ ಎಂಬ ಪ್ರಸಂಗವನ್ನು ಆಡಿ ತೋರಿಸಿದರು.
ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಧಾಕರ್ ರಾವ್ ಎಎಸ್ಐ, ಕದ್ರಿ ಪೊಲೀಸ್ ಠಾಣೆ, ಮೇಜರ್ ವಿಜಯಚಂದ್ರ, ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಶ್ರೀಮತಿ ಶೋಭಾ ಪೂಜಾರಿ, ರಾಜ ಕೆ ಕೋಟ್ಯಾನ್ ಗೌರವಾಧ್ಯಕ್ಷರು ಯೂತ್ ಸೆಂಟರ್ (ರಿ) ಪಡೀಲ್ ಸೆಂಟರ್ ಮಹಿಳಾ ಮಂಡಲ, ಉದಯ್ ಕೆಪಿ, ಅಧ್ಯಕ್ಷರು ಯೂತ್ ಸೆಂಟರ್ (ರಿ) ಪಡೀಲ್ ಯೂತ್ ಸೆಂಟರ್ ಮಹಿಳಾ ಮಂಡಲ ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ಮೇಜರ್ ವಿಜಯಚಂದ್ರ ನಿವೃತ್ತ ಸೈನಿಕರು, ಭಾರತೀಯ ಭೂಸೇನೆ, ಚಂದ್ರಶೇಖರ ಬನಾರಿ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು, ದೀನ್ ರಾಜ್ ಕಳವಾರು ಭಜಕ ಸಾಧಕ ಪ್ರಶಸ್ತಿ ಪುರಸ್ಕೃತರು, ಗಂಗಾಧರ ಶೆಟ್ಟಿಗಾರ್ ಸಂಸ್ಥಾಪಕರು ಪ್ರಸಾದನ ಸಂಸ್ಥೆ ಮೋಹಿನಿ ಕಲಾಸಂಪದ ಕಿನ್ನಿಗೋಳಿ ಇವರನ್ನು ಸನ್ಮಾನಿಸಲಾಯಿತು. ಸುಧೀರ್ ಪಿ ಸ್ವಾಗತಿಸಿದರು ಉದಯಕುಮಾರ್ ಪ್ರಸ್ತಾವಿಸಿದರು, ಧನಂಜಯ ಶೆಟ್ಟಿ ವಂದಿಸಿದರು. ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.