ಕೇರಳ: “ಪತ್ನಿ ಕೆಟ್ಟದಾಗಿ ಅಡುಗೆ ಮಾಡಿದರೆ ಅದು ಕ್ರೌರ್ಯವಲ್ಲ, ಇದಕ್ಕಾಗಿ ವಿಚ್ಚೇದನ ಕೊಡುವಂತಿಲ್ಲ” ಎಂದು ಕೇರಳ ಹೈಕೋರ್ಟ್ ಹೇಳಿದ್ದು, ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿದೆ.
ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ಹೆಂಡತಿಗೆ ಹೇಗೆ ಅಡುಗೆ ಮಾಡಬೇಕೆಂದು ತಿಳಿಯದಿರುವುದನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಸೋಫಿ ಥಾಮಸ್ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತನ್ನ ಹೆಂಡತಿಯ ವಿರುದ್ಧ ಆತ ಮಾಡಿದ್ದ ಒಂದು ಆರೋಪವೆಂದರೆ ಆಕೆಯ ಅಡುಗೆ ಕೌಶಲ್ಯದ ಕೊರತೆ. ಪತ್ನಿಗೆ ಅಡುಗೆ ಗೊತ್ತಿಲ್ಲ ಎಂಬುದು. ಅರ್ಜಿ ಸಲ್ಲಿಸಿರುವ ಪತಿಗೆ ಅಡುಗೆ ಮಾಡುವ ಕೌಶಲ್ಯ ಇಲ್ಲ ಎಂದು ಹೇಳಲಾಗಿದೆ.
“ಪತ್ನಿ ಕೆಟ್ಟದಾಗಿ ಅಡುಗೆ ಮಾಡಿದರೆ ಅದಕ್ಕಾಗಿ ವಿಚ್ಛೇದನ ಕೊಡುವಂತಿಲ್ಲ” ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಅಲ್ಲದೆ ಇದನ್ನು ಕಾನೂನುಬದ್ಧ ವಿವಾಹವನ್ನು ವಿಸರ್ಜಿಸುವಷ್ಟು ಕ್ರೌರ್ಯ ಎಂದು ಕರೆಯಲಾಗುವುದಿಲ್ಲ ಅಂತ ತಿಳಿಸಿದೆ.