ತಿರುವನಂತಪುರಂ: ಯೂಟ್ಯೂಬ್ ಚಾನೆಲ್ಗಳಲ್ಲಿ ಮಾನಹಾನಿಕರ ಮತ್ತು ಪ್ರಚೋದಕ ವಿಷಯಗಳನ್ನು ಗಮನಿಸಿ ಅಂತಹ ವಿಡಿಯೋಗಳನ್ನು ನಿರ್ಬಂಧಿಸಲು ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಗುರುವಾರ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.
ಶಾಸಕ ಪಿ.ವಿ.ಅನ್ವರ್ ಅವರು ಕೇಳಿದ ಪ್ರಶ್ನೆಗೆ ಸದನದಲ್ಲಿ ಮೇಲಿನಂತೆ ವಿಜಯನ್ ಪ್ರತಿಕ್ರಿಯೆ ನೀಡಿದ್ದಾರೆ. ಯೂಟ್ಯೂಬ್ ಕಂಟೆಂಟ್ ಬಗ್ಗೆ ದೂರುಗಳನ್ನು ಪರಿಶೀಲಿಸಲು ರಾಜ್ಯ ಐಟಿ ಕಾರ್ಯದರ್ಶಿ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ವಿಜಯನ್ ಹೇಳಿದರು. ನ್ಯಾಯಾಲಯದ ನಿರ್ದೇಶನಗಳ ಆಧಾರದ ಮೇಲೆ ನೋಡಲ್ ಅಧಿಕಾರಿಯು ಅಂತಹ ವಿಡಿಯೋಗಳನ್ನು ನಿರ್ಬಂಧಿಸಲು ಸಂಬಂಧಿಸಿದ ಅಧಿಕಾರಿಗೆ ಶಿಫಾರಸು ಮಾಡಬಹುದು ಎಂದರು.