News Karnataka Kannada
Monday, April 29 2024
ದೇಶ

ಕೋವಿಡ್ ಹೊರತಾಗಿಯೂ ಎನ್ಡಿಎ ನೀತಿಗಳಿಂದಾಗಿ ಆರ್ಥಿಕತೆ ಅಭಿವೃದ್ಧಿ ಕಂಡಿದೆ: ವಿತ್ತ ಸಚಿವೆ

Nirmala Sitharaman in Parliament
Photo Credit : News Kannada

ನವದೆಹಲಿ: ಯುಪಿಎ ಸರಕಾರ ಯೋಜನೆಗಳನ್ನು ಆರಂಭಿಸುವುದಾಗಿ ಕೇವಲ ಭರವಸೆಗಳನ್ನು ಮಾತ್ರ ನೀಡಿದ್ದು, ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆ ಭರವಸೆಗಳನ್ನು ಈಡೇರಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಳೆದ ಒಂಬತ್ತು ವರ್ಷಗಳಲ್ಲಿ ವಿದ್ಯುತ್ ಸೌಲಭ್ಯಗಳಿಂದ ಹಿಡಿದು ಶೌಚಾಲಯದವರೆಗೆ ಬಿಜೆಪಿ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಿದೆ. ಆದ್ದರಿಂದ, ಭಾರತವು ಈಗ ತನ್ನ ಭವಿಷ್ಯದ ಬೆಳವಣಿಗೆಯ ಬಗ್ಗೆ ಆಶಾವಾದಿ ಮತ್ತು ಧನಾತ್ಮಕವಾಗಿರುವ ಅಪರೂಪದ ಸ್ಥಾನದಲ್ಲಿದೆ ಎಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಇಂದು ಉತ್ತರಿಸುತ್ತಾ ವಿತ್ತ ಸಚಿವೆ ಮಾತನಾಡಿದರು.

“2013 ರಲ್ಲಿ, ಮೋರ್ಗನ್ ಸ್ಟಾನ್ಲಿ ಭಾರತವನ್ನು ವಿಶ್ವದ ಐದು ದುರ್ಬಲ ಆರ್ಥಿಕತೆಯ ಪಟ್ಟಿಯಲ್ಲಿ ಸೇರಿಸಿದ್ದರು. ಭಾರತ ದೇಶವನ್ನು ದುರ್ಬಲ ಆರ್ಥಿಕ ದೇಶ ಎಂದು ಘೋಷಿಸಲಾಗಿತ್ತು. ಇಂದು ಅದೇ ಮಾರ್ಗನ್ ಸ್ಟಾನ್ಲಿ ಭಾರತವನ್ನು ಮೇಲ್ದರ್ಜೆಗೇರಿಸಿ ಹೆಚ್ಚಿನ ರೇಟಿಂಗ್ ನೀಡಿದೆ.

ಕೇವಲ 9 ವರ್ಷಗಳಲ್ಲಿ, ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ನಮ್ಮ ಸರ್ಕಾರದ ನೀತಿಗಳಿಂದಾಗಿ ಆರ್ಥಿಕತೆಯು ಏರಿಕೆಯಾಗಿ ಅಭಿವೃದ್ಧಿ ಕಂಡಿದೆ. ಇಂದು ನಾವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶ ಎಂಬ ಕೀರ್ತಿಗೆ ಭಾಜನರಾಗಿದ್ದೇವೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು