ಎರಡು ಬಗೆಯ ಬಾವಲಿಗಳಲ್ಲಿ ನಿಫಾ ವೈರಸ್ ವಿರುದ್ಧ ಪ್ರತಿಕಾಯಗಳು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್ಐವಿ) ಕೋಯಿಕ್ಕೋಡ್ನಲ್ಲಿನ ವಿವಿಧ ಬಗೆಯ ಬಾವಲಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದೆ. ಅದರಲ್ಲಿ ಎರಡು ವಿಧದ ಬಾವಲಿಗಳಲ್ಲಿ ನಿಫಾ ಸೋಂಕಿನ ವಿರುದ್ಧ ಪ್ರತಿಕಾಯಗಳು ಕಂಡುಬಂದಿವೆ. ಬಾವಲಿಗಳಿಂದ ನಿಫಾ ಸೋಂಕು ಹರಡುತ್ತದೆ ಎಂಬ ವಾದಕ್ಕೆ ಬಲ ಬಂದಿದೆ’ ಎಂದು ಅವರು ಹೇಳಿದ್ದಾರೆ.
ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ನಿಫಾ ವೈರಸ್ಗೆ ಬಲಿಯಾಗಿ ಸುಮಾರು ಒಂದು ತಿಂಗಳ ನಂತರ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಬಾವಲಿಗಳನ್ನು ಸೋಂಕಿನ ಮೂಲವೆಂದು ಭಾವಿಸಬಹುದು ಎಂದು ಘೋಷಿಸಿದ್ದಾರೆ.
ಕಳೆದ 21 ದಿನಗಳಲ್ಲಿ ಯಾವುದೇ ನಿಫಾ ಪ್ರಕರಣಗಳು ವರದಿಯಾಗಿಲ್ಲ. ಸೋಂಕು ಹರಡುವಿಕೆ ತಡೆಯಲು ತೆಗೆದುಕೊಂಡ ಕ್ರಮಗಳು ಪರಿಣಾಮ ಬೀರಿವೆ ಎಂದು ಹೇಳಿದ್ದಾರೆ. ಈ ಹಿಂದೆ, ಚತಮಂಗಲಂ ಪಂಚಾಯತ್ನ ವಿವಿಧ ಭಾಗಗಳಿಂದ ಸಂಗ್ರಹಿಸಿದ ರಂಬುಟಾನ್ ಮತ್ತು ಅರೆಕಾ ಸೇರಿದಂತೆ ಹಲವು ಹಣ್ಣುಗಳು ಮತ್ತು ವಾಣಿಜ್ಯ ಬೆಳೆಗಳನ್ನು ನಿಫಾ ವೈರಸ್ಗಾಗಿ ಪರೀಕ್ಷಿಸಿದಾಗ ಋಣಾತ್ಮಕ ವರದಿ ಬಂದಿತ್ತು. ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಪ್ರದೇಶವನ್ನು ಪರಿಶೀಲಿಸಲು ಮತ್ತು ಅಲ್ಲಿ ನಿಫಾ ಮೂಲವನ್ನು ಪತ್ತೆಹಚ್ಚಲು ಕೇಂದ್ರ ತಂಡವು ಚತಮಂಗಲಂಗೆ ಭೇಟಿ ನೀಡಿತ್ತು.
2018 ರಲ್ಲಿ ನಿಫಾ ವೈರಸ್ ಸೋಂಕಿನಿಂದ 21 ಸಾವುಗಳಿಗೆ ಕೇರಳ ಸಾಕ್ಷಿಯಾಗಿತ್ತು.