News Karnataka Kannada
Saturday, May 04 2024
ದೇಶ

ಅಪಹರಣಕ್ಕೊಳಗಾಗಿದ್ದ ಪಾಕ್‌ ನ 19 ನಾವಿಕರನ್ನು ರಕ್ಷಿಸಿದ ‘ಭಾರತೀಯ ನೌಕಾಪಡೆ’

Recus
Photo Credit : News Kannada

ನವದೆಹಲಿ: ಸೋಮಾಲಿಯಾದ ಪೂರ್ವ ಕರಾವಳಿಯಲ್ಲಿ ಕಡಲ್ಗಳ್ಳರು ಪಾಕಿಸ್ತಾನಿಗಳಿದ್ದ ಮೀನುಗಾರಿಕಾ ಹಡಗುನ್ನು ಅಪಹರಿಸಿದ್ದರು. ಇದೀಗ ಆ ಹಡಗನಲ್ಲಿದ್ದ 19 ಪಾಕಿಸ್ತಾನ ನಾವಿಕರನ್ನು ಭಾರತೀಯ ಯುದ್ಧನೌಕೆ INS ಸುಮಿತ್ರಾ ರಕ್ಷಿಸಿದೆ.

ಇದು 36 ಗಂಟೆಗಳಲ್ಲಿ ಭಾರತೀಯ ಯುದ್ಧನೌಕೆ ನಡೆಸಿದ ಎರಡನೇ ಕಾರ್ಯಚರಣೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹನ್ನೊಂದು ಶಸ್ತ್ರಸಜ್ಜಿತ ಕಡಲ್ಗಳ್ಳರು ಇರಾನಿ ಧ್ವಜವುಳ್ಳ ಹಡಗನ್ನು ಅಪಹರಿಸಿದ್ದು, 19 ಪಾಕಿಸ್ತಾನ ನಾವಿಕರನ್ನು ಒತ್ತೆಯಾಳುಗಳಾಗಿ ಇರಿಸಿದರು. ಈ ಬಗ್ಗೆ ಮಾಹಿತಿ ಪಡೆದ ಭಾರತೀಯ ಯುದ್ಧನೌಕೆ ಕಡಲ್ಗಳ್ಳರು ವಶದಲ್ಲಿದ್ದ ಹಡಗನ್ನು ತಡೆದು, 19 ಪಾಕಿಸ್ತಾನ ಒತ್ತೆಯಾಳುಗಳನ್ನು ರಕ್ಷಿಸಿದ್ದಾರೆ.

ಮತ್ತೊಂದು ಕಡೆ ಅರಬ್ಬೀ ಸಮುದ್ರದ ಸೊಮಾಲಿ ಕಡಲ್ಗಳ್ಳರಿಂದ ಅಪಹರಣಕ್ಕೊಳಗಾಗಿದ್ದ ಮೀನುಗಾರಿಕಾ ಹಡಗು ಇಮಾನ್​​​ನ್ನು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮಿತ್ರಾ ರಕ್ಷಣೆ ಮಾಡಿದೆ. ಈ ಹಡಗಿನಲ್ಲಿ 17 ಜನ ಭಾರತೀಯ ಮೀನುಗಾರರಿದ್ದರು ಎಂದು ಹೇಳಲಾಗಿದೆ. ಈ ಪ್ರದೇಶದಲ್ಲಿ ಭಾರತೀಯ ನೌಕಪಡೆಗಳು ಭದ್ರತೆಯನ್ನು ಹೆಚ್ಚಿಸಿದ್ದು, ಭಾರತಕ್ಕೆ ಹೋಗುವ ವ್ಯಾಪಾರಿ ಹಡಗುಗಳ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು