ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧ ಇಂದು ನಿನ್ನೆದಲ್ಲ. ಇದಕ್ಕೆ ಕೊನೆ ಯಾವಾಗ ಎಂದು ಕಾದು ನೋಡಬೇಕಿದೆ. ಈ ನಡುವೆ ಇಸ್ರೇಲ್ ನಲ್ಲಿ ಸಂಭವಿಸಿದ ದುರಂತ ಕಾಶ್ಮೀರದಲ್ಲಿಯೂ ಸಂಭವಿಸಲಿದೆ ಎಂದು ಪಾಕಿಸ್ತಾನ ಬೆದರಿಕೆ ಹಾಕಿದೆ. ಅನೇಕ ಪಾಕಿಸ್ತಾನಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಪಾಕಿಸ್ತಾನದ ಅನೇಕ ಮೂಲಭೂತವಾದಿಗಳು ಕಾಶ್ಮೀರದಲ್ಲಿಯೂ ಇದೇ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳುತ್ತಿದ್ದಾರೆ.
ಭಾರತದಲ್ಲಿ ಪಾಕಿಸ್ತಾನದ ಹೈಕಮಿಷನರ್ ಆಗಿದ್ದ ಅಬ್ದುಲ್ ಬಾಸಿತ್ ಕೂಡ ಇದೇ ರೀತಿಯ ಮಾತನ್ನು ಹೇಳಿದ್ದಾರೆ. ಪಾಕಿಸ್ತಾನಿ ಜನರು ಇಸ್ರೇಲಿ ನಾಗರಿಕರ ಶವಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ನಾವು 12 ನಿಮಿಷಗಳಲ್ಲಿ ಇಸ್ರೇಲ್ ಅನ್ನು ನಿರ್ಮೂಲನೆ ಮಾಡಬಹುದು ಎಂದು ಪಾಕಿಸ್ತಾನದ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಶಾಂತಿ ಬೇಕಾದರೆ, ಪ್ಯಾಲೆಸ್ಟೈನ್ ಸಮಸ್ಯೆಯನ್ನು ಪರಿಹರಿಸಬೇಕು ನಾವು ದಕ್ಷಿಣ ಏಷ್ಯಾದಲ್ಲಿ ಶಾಂತಿಯನ್ನು ಬಯಸಿದರೆ, ಕಾಶ್ಮೀರದ ವಿಷಯವನ್ನು ಚರ್ಚಿಸಬೇಕು. ಭಾರತ ಮತ್ತು ಇಸ್ರೇಲ್ ತಮ್ಮ ಅಕ್ರಮ ಆಕ್ರಮಣವನ್ನು ತೊರೆಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಭಾರತ ಮತ್ತು ಕಾಶ್ಮೀರ್ ನಡುವೆ ಇದೇ ದುರಂತ ಆಗಲಿದೆ ಎಂದು ಬಸಿತ್ ಹೇಳಿದ್ದಾರೆ.