News Karnataka Kannada
Tuesday, May 07 2024
ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದಲ್ಲಿ ವರುಣ ರೌದ್ರ ನರ್ತನ: ರಸ್ತೆ, ಮನೆಗಳು ಕ್ಷಣಾರ್ಧದಲ್ಲಿ ಮಾಯ

In Himachal Pradesh, varuna dances, roads, houses disappear in a jiffy
Photo Credit : IANS

ಶಿಮ್ಲಾ: ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಭೂಕುಸಿತ, ಹಿಮಪಾತದಲ್ಲಿ ಸಿಲುಕಿದ್ದ 75 ಮಹಿಳೆಯರು ಸೇರಿದಂತೆ 300 ಜನರನ್ನು ರಕ್ಷಿಸಲಾಗಿದೆ. ಕಳೆದ ಮೂರು ದಿನಗಳಿಂದ ಚಂದ್ರತಾಲ್‌ನಲ್ಲಿ 300 ಮಂದಿ ಸಿಲುಕಿಕೊಂಡಿದ್ದು ಈ ಪೈಕಿ ಹೆಚ್ಚಿನವರು ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನವರು. ಅಲ್ಲದೆ ಐರ್ಲೆಂಡ್‌ ಮತ್ತು ಅಮೆರಿಕದ ಇಬ್ಬರು ವಿದೇಶಿ ಮಹಿಳೆಯರೂ ಸೇರಿದ್ದಾರೆ. ಜಿಲ್ಲಾಡಳಿತ ಅವರನ್ನು ತಾತ್ಕಾಲಿಕ ಶಿಬಿರ ಮತ್ತು ಸ್ಥಳೀಯರ ಮನೆಗಳಲ್ಲಿ ಆಶ್ರಯ ಪಡೆದುಕೊಳ್ಳಲು ವ್ಯವಸ್ಥೆ ಮಾಡಿದೆ.

ರಾಜ್ಯಾದ್ಯಂತ ರಕ್ಷಣಾ ಕಾರ್ಯಾಚರಣೆಯ ಮೇಲೆ ನಿಗಾ ವಹಿಸಿರುವ ಹಂಗಾಮಿ ಪೊಲೀಸ್ ಮಹಾನಿರ್ದೇಶಕ ಸತ್ವಂತ್ ಅತ್ವಾಲ್ ಅವರು, ಚಂದ್ರತಾಲ್‌ನಲ್ಲಿ 225 ಪುರುಷರು ಮತ್ತು 75 ಮಹಿಳೆಯರು ಕ್ಯಾಂಪ್‌ ನಲ್ಲಿ ರಕ್ಷಣೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಪೈಕಿ ಒಂದು ಮಗು, ಮೂವರು ಹಿರಿಯ ನಾಗರಿಕರು ಸೇರಿದ್ದಾರೆ. ಮೊಬೈಲ್ ನೆಟ್‌ವರ್ಕ್‌ ದೊರೆಯದೆ ಇರುವ ಕಾರಣ ಜಿಲ್ಲಾಡಳಿತ ಸೆಟಲೈಟ್‌ ಫೋನ್‌ ಮೂಲಕ ಹಿಮಪಾತದಲ್ಲಿ ಸಿಲುಕಿದ್ದ ಜನರನ್ನು ಸಂಪರ್ಕಿಸಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಶಿಮ್ಲಾ, ಸಿರ್ಮೌರ್ ಮತ್ತು ಕಿನ್ನೌರ್ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಶಿಮ್ಲಾದ ಹವಾಮಾನ ಕಚೇರಿ ಮಂಗಳವಾರ ಮುನ್ಸೂಚನೆ ನೀಡಿದೆ. ಧಾರಾಕಾರ ಮಳೆ, ಹಿಮಪಾತವು ರಸ್ತೆ ಸಂಪರ್ಕ ಮರುಸ್ಥಾಪನೆಗೆ ಸಮಸ್ಯೆಯಾಗಿದೆ ಎಂದು ಸ್ಥಳೀಯಾಡಳಿತ ಹೇಳಿದೆ. ಲಾಹೌಲ್‌ ಕಣಿವೆಯ ಸಿಸ್ಸು ಗ್ರಾಮದದಲ್ಲಿ ಪ್ರವಾಹ ವಿಕೋಪಕ್ಕೆ ಹೋಗಿದ್ದು ರಸ್ತೆ ಸಂಪರ್ಕ ಕಡಿದು ಬಸ್‌ ಮತ್ತು ವಾಹನಗಳಲ್ಲಿ ಹಲವರು ಸಿಲುಕಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಭಿಷೇಕ್ ತ್ರಿವೇದಿ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು