ಶಿಮ್ಲಾ: ಶಿಮ್ಲಾದಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಇಲ್ಲಿಂದ ಸಾಗಾಟವಾಗುತ್ತಿದ್ದ ಸೇಬುಹಣ್ಣುಗಳನ್ನು ಸಾಗಿಸಲಾಗುತ್ತಿಲ್ಲ. ಇದೇ ಕಾರಣದಿಂದ ಸೇಬು ಬೆಳೆಗಾರರು ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಸೇಬುಹಣ್ಣುಗಳನ್ನು ರಸ್ತೆ ಬದಿ ಎಸೆಯುತ್ತಿದ್ದು, ನದಿಗಳಲ್ಲಿ ತೇಲಿಬಿಡುತ್ತಿದ್ದಾರೆ.
ಸೇಬು ಸಾಗಿಸುವ ನೂರಾರು ಟ್ರಕ್ಗಳು ಮೇಲ್ಭಾಗದ ಜುಬ್ಬಲ್, ರೋಹ್ರು, ಕೊಟ್ಖೈ, ಚೋಪಾಲ್ ಪ್ರದೇಶಗಳಲ್ಲಿ ಸಿಲುಕಿಕೊಂಡಿವೆ ಎಂದು ಹಣ್ಣು ಬೆಳೆಗಾರರು ಐಎಎನ್ಎಸ್ಗೆ ತಿಳಿಸಿದ್ದಾರೆ.
ರಸ್ತೆಗಳ ಸ್ಥಿತಿ ತುಂಬಾ ಕೆಟ್ಟದಾಗಿದ್ದು ಟ್ರಕ್ ಚಾಲಕರು ವಾಹನ ಚಲಾಯಿಸಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಸೇಬು ಕೊಳೆಯಲು ಆರಂಭವಾಗಿದ್ದು, ಇದೇ ಕಾರಣದಿಂದ ಹಲವರು ಸೇಬು ಹಣ್ಣನ್ನು ರಸ್ತೆ ಮತ್ತು ನದಿಯಲ್ಲಿ ಎಸೆಯುತ್ತಿದ್ದಾರೆ ಎಂದು ರೊಹ್ರುದ ಬೆಳೆಗಾರ ದೀಪಕ್ ಮಾಂತ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವ ವಿಕ್ರಮಾದಿತ್ಯ ಸಿಂಗ್ ಮಾತನಾಡಿ, ಭಾರೀ ಮಳೆಯಿಂದಾಗಿ ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಕಳೆದ ವಾರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಪ್ರಾದೇಶಿಕ ಅಧಿಕಾರಿ ಅಬ್ದುಲ್ ಬಸಿತ್ ಅವರು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಮಾಡಿ ಪ್ರವಾಹ ಹಾನಿ ವರದಿ ಸಲ್ಲಿಸಿದ್ದಾರೆ ಎಂದರು.
ಈ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಮತ್ತು ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸೇಬು ಡಂಪಿಂಗ್ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ: “ಶಿಮ್ಲಾದ ಸೇಬು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ನದಿಯಲ್ಲಿ ಹಾಕುತ್ತಿದ್ದಾರೆ. ಹಿಮಾಚಲದ ಕಾಂಗ್ರೆಸ್ ಸರ್ಕಾರವು ರೈತರಿಗೆ ಹಣ್ಣುಗಳನ್ನು ಮಾರುಕಟ್ಟೆಗೆ ತಲುಪಿಸಲು ಸಹಾಯ ಮಾಡಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಜುಲೈ ನಿಂದ ಅಕ್ಟೋಬರ್ ಅಂತ್ಯದವರೆಗೆ ಸೇಬು ಕೊಯ್ಲಿನ ಕಾಲ. 2022-23 ರಲ್ಲಿ ರಾಜ್ಯವು ಡಿಸೆಂಬರ್ 2022 ರವರೆಗೆ 674,000 ಟನ್ ಸೇಬು ಉತ್ಪಾದಿಸಿದೆ.