ಹುಬ್ಬಳ್ಳಿ: ಕಾಂಗ್ರೆಸ್ ರಾಜ್ಯ ಸರ್ಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಈಗ ಆಟೋ ಚಾಲಕರು ಮತ್ತು ಖಾಸಗಿ ವಾಹನಗಳ ಮೇಲೆ ಎಫೆಕ್ಟ್ ಬಿದ್ದಿದ್ದು, ನಾಳೆ ಜುಲೈ 31ರಂದು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಆಟೋ ಬಂದ್ ಕರೆ ನೀಡಿದ್ದಾರೆ.
ಹೀಗೆ ಆಟೋದಲ್ಲಿ ಶಕ್ತಿ ಯೋಜನೆ ವಿರೋಧಿಸಿ ಆಟೋ ಬಂದ್ ಎಂದು ಆಟೋಗಳನ್ನು ಭಿತ್ತಿ ಪತ್ರ ಹಚ್ಚಿದರೆ , ಇನ್ನೊಂದೆಡೆ ಮೈಕ್ ಮೂಲಕ ನಾಳೆ ದಿನದಂದು ಹುಬ್ಬಳ್ಳಿ ಧಾರವಾಡದಲ್ಲಿ ಬೆಳಗ್ಗೆ 6 ರಿಂದ ಸಾಯಂಕಾಲ 6 ರವರೆಗೆ ಆಟೋ ಬಂದ್ ಇರುತ್ತದೆಂದು ಅನೌನ್ಸ್ ಮಾಡುತ್ತಿದ್ದಾರೆ. ಈ ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರು ಒಂದುಹೊತ್ತಿನ ದುಡಿಮೆಗಾಗಿ ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ನಗರಗಳಲ್ಲಿನ ಉಚಿತ ಬಸ್ ಪ್ರಯಾಣವನ್ನು ರದ್ದು ಮಾಡಬೇಕು, ಎಲ್ಲ ಆಟೋ ಚಾಲಕರಿಗೆ ಕಾರ್ಮಿಕರ ಕಾರ್ಡ್ ನೀಡಬೇಕೆಂದು ಒತ್ತಾಯಿಸಿ, ಸೋಮವಾರದಂದು ಹುಬ್ಬಳ್ಳಿ ಧಾರವಾಡದ 25 ಸಾವಿರ ಆಟೋ ಚಾಲಕರು ಬಂದ್ ಕರೆ ನೀಡಿದ್ದು, ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡಲಿದ್ದೆವೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.