ಜೈಪುರ: ಹರಿಯಾಣದಲ್ಲಿ ನಡೆಯುತ್ತಿರುವ ಕೋಮುಗಲಭೆ ಕುರಿತು ಅಜ್ಮೀರ್ ದರ್ಗಾದ ದಿವಾನ್ ಸೈಯದ್ ಝೈನುಲ್ ಅಬೇದಿನ್ ತೀವ್ರ ಕಳಕಳಿ ವ್ಯಕ್ತಪಡಿಸಿದ್ದು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಂಡು ಬರಲು ಎಲ್ಲಾ ಧಾರ್ಮಿಕ ಮುಖಂಡರಿಗೆ ಮನವಿ ಮಾಡಿದ್ದಾರೆ.
ರಾಜಕಾರಣಿಗಳು ಸಂಯಮದಿಂದ ವರ್ತಿಸಬೇಕು. ತಾವು ಬಳಸುವ ಭಾಷೆಯ ಮೇಲೆ ನಿಗಾ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿಗಳಿಗಿಂತ ದೇಶದ ಬಗ್ಗೆ ಯೋಚಿಸಬೇಕಿದೆ. ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ನೀಡಬೇಡಿ, ಈ ದೇಶಕ್ಕಿಂತ ರಾಜಕೀಯ ದೊಡ್ಡದಲ್ಲ ಎಂಬುದನ್ನು ಮರೆಯದಿರಿ, ಶಾಂತಿ ಕಾಪಾಡಲು ಎಲ್ಲರೂ ಸಾಂಘಿಕ ಪ್ರಯತ್ನ ಅಗತ್ಯ ಎಂದು ಹೇಳಿದ್ದಾರೆ.