ಹರಿಯಾಣ: ಅಂಬಾಲಾ ಜಿಲ್ಲೆಯ ಶಹಜಾದ್ಪುರದಲ್ಲಿ ಖಾಸಗಿ ಬಸ್ ಮತ್ತು ಟ್ರೈಲರ್ ನಡುವೆ ಸಂಭವಿಸಿದ ಅಪಘಾತದಲ್ಲಿ 8 ಪ್ರಯಾಣಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಬಸ್ ಉತ್ತರ ಪ್ರದೇಶದ ಬರೇಲಿಯಿಂದ ಹಿಮಾಚಲ ಪ್ರದೇಶದ ಬದ್ದಿಗೆ ಹೋಗುತ್ತಿತ್ತು. ಆರು ಶವಗಳನ್ನು ನಾರಾಯಣಗಢ ಪಟ್ಟಣದ ಸಿವಿಲ್ ಆಸ್ಪತ್ರೆಗೆ ಮತ್ತು ಎರಡು ಶವಗಳನ್ನು ಪಂಚಕುಲ ಪಟ್ಟಣಕ್ಕೆ ಕಳುಹಿಸಲಾಗಿದೆ.
ಗಾಯಗೊಂಡವರನ್ನು ಚಂಡೀಗಢದ ಪಿಜಿಐಗೆ ಕಳುಹಿಸಲಾಗಿದೆ.