ಗುಜರಾತ್ : ರಾತ್ರಿ ವೇಳೆ ಮಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಮಲಗಿದ್ದ ಮಗು ಸೇರಿ ನಾಲ್ವರು ಸಾವನಪ್ಪಿರುವ ಘಟನೆ ಗುಜರಾತ್ನ ದ್ವಾರಕಾ ಜಿಲ್ಲೆಯ ಆದಿತ್ಯ ರಸ್ತೆಯಲ್ಲಿ ನಡೆದಿದೆ.
ದ್ವಾರಕಾ ನಗರದ ಆದಿತ್ಯ ರಸ್ತೆಯಲ್ಲಿನ ನಿವಾಸಿಗಳಾದ ಪವನ್ ಉಪಾಧ್ಯಾಯ (39), ಅವರ ಪತ್ನಿ ತಿಥಿ (29), ಮಗಳು ಧ್ಯಾನ ಮತ್ತು ತಾಯಿ ಭವಾನಿಬೆನ್ (69) ಮೃತಪಟ್ಟವರು.
ಕುಟುಂಬದ ಐವರು ಮನೆಯಲ್ಲಿ ಮಲಗಿದ್ದ ವೇಳೆ ಮೊದಲ ಮಹಡಿಯಲ್ಲಿ ಬೆಳಗಿನ ಜಾವ 3.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ಈ ವೇಳೆ ಕರೆಂಟ್ ಹೋಗಿದ್ದರಿಂದ ಕತ್ತಲಿನಲ್ಲಿ ಹೇಗೆ ಬರುವುದು ಎಂದು ಅವರಿಗೆ ತೋಚಿಲ್ಲ. ಹೀಗಾಗಿ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಕುಟುಂಬಸ್ಥರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.