ಗೋವಾ: ತಾಯಿ ತನ ಮಗನನ್ನ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಗೋವಾದ ಕಾಲಂಗುಟೆ ಪೊಲೀಸ್ ಸ್ಟೇಷನ್ನಲ್ಲಿ ಕಸ್ಟಡಿಯಲ್ಲಿರುವ ಸುಚನಾಳಿಂದ ಪೊಲೀಸರು ಮಾಹಿತಿ ಕೆದಕುತ್ತಿದ್ದಾರೆ. ಈ ವೇಳೆ ಪತಿ ವೆಂಕಟರಾಮನ್ ಅವರನ್ನು ಕೂಡಾ ಪೊಲೀಸರು ಠಾಣೆಗೆ ಕರೆಸಿದ್ದರು. ಈ ಸಂದರ್ಭದಲ್ಲಿ ಸುಚನಾ ಜೊತೆ ಮಾತನಾಡಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಆದ್ರೆ ಮಾತುಕತೆ ವೇಳೆಯೇ ಸುಚನಾ ಪತಿ ಮೇಲೆ ರೇಗಾಡಿ ಜಗಳ ತೆಗೆದಿದ್ದಾಳೆ.
ಪೊಲೀಸರೆದುರೇ ಇಬ್ಬರೂ ಜೋರು ಜೋರಾಗಿ ಜಗಳವಾಡಿಕೊಂಡಿದ್ದಾರೆ. ನನ್ನ ಮಗನನ್ನು ಏಕೆ ಕೊಂದೆ ಎಂದು ಪತ್ನಿಯನ್ನ ವೆಂಕಟರಾಮನ್ ಪ್ರಶ್ನಿಸಿದ್ದಾರೆ. ಅದಕ್ಕೆ ಸುಚನಾ ಸೇಠ್ ನಾನು ಮಗುವನ್ನು ಕೊಂದಿಲ್ಲ ಎಂದಿದ್ದಾಳೆ. ನಾನು ಪೊಲೀಸ್ ಕಸ್ಟಡಿಯಲ್ಲಿದ್ದೇನೆ. ಆದ್ರೆ ನೀನು ಆರಾಮಾಗಿ ಹೊರಗೆ ಓಡಾಡಿಕೊಂಡಿದ್ದೀಯಾ ಎಂದು ಜಗಳ ತೆಗೆದಿದ್ದಾಳೆ. ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳ ಜೋರಾಗಿದೆ. ಕಡೆಗೆ ಕಾಲಂಗುಟೆ ಪೊಲೀಸರೇ ಮಧ್ಯಪ್ರವೇಶಿಸಿ ಜಗಳ ತಡೆದಿದ್ದಾಗಿ ಹೇಳಲಾಗ್ತಿದೆ. ಪೊಲೀಸ್ ಸ್ಟೇಷನ್ಲ್ಲಿ ಪತಿ ವೆಂಕಟರಾಮನ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ.