News Karnataka Kannada
Monday, April 29 2024
ಗೋವಾ

ಸುಚನಾ ಸೇಠ್ ಕೇಸ್: ಪತಿ ವೆಂಕಟರಾಮನ್‌ ಅವರನ್ನು ಠಾಣೆಗೆ ಕರೆಸಿದ ಪೊಲೀಸರು

ತಾಯಿ ತನ ಮಗನನ್ನ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಗೋವಾದ ಕಾಲಂಗುಟೆ ಪೊಲೀಸ್ ಸ್ಟೇಷನ್‌ನಲ್ಲಿ ಕಸ್ಟಡಿಯಲ್ಲಿರುವ ಸುಚನಾಳಿಂದ ಪೊಲೀಸರು ಮಾಹಿತಿ ಕೆದಕುತ್ತಿದ್ದಾರೆ. ಈ ವೇಳೆ ಪತಿ ವೆಂಕಟರಾಮನ್‌ ಅವರನ್ನು ಕೂಡಾ ಪೊಲೀಸರು ಠಾಣೆಗೆ ಕರೆಸಿದ್ದರು. ಈ ಸಂದರ್ಭದಲ್ಲಿ ಸುಚನಾ ಜೊತೆ ಮಾತನಾಡಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಆದ್ರೆ ಮಾತುಕತೆ ವೇಳೆಯೇ ಸುಚನಾ ಪತಿ ಮೇಲೆ ರೇಗಾಡಿ ಜಗಳ ತೆಗೆದಿದ್ದಾಳೆ.
Photo Credit : News Kannada

ಗೋವಾ: ತಾಯಿ ತನ ಮಗನನ್ನ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಗೋವಾದ ಕಾಲಂಗುಟೆ ಪೊಲೀಸ್ ಸ್ಟೇಷನ್‌ನಲ್ಲಿ ಕಸ್ಟಡಿಯಲ್ಲಿರುವ ಸುಚನಾಳಿಂದ ಪೊಲೀಸರು ಮಾಹಿತಿ ಕೆದಕುತ್ತಿದ್ದಾರೆ. ಈ ವೇಳೆ ಪತಿ ವೆಂಕಟರಾಮನ್‌ ಅವರನ್ನು ಕೂಡಾ ಪೊಲೀಸರು ಠಾಣೆಗೆ ಕರೆಸಿದ್ದರು. ಈ ಸಂದರ್ಭದಲ್ಲಿ ಸುಚನಾ ಜೊತೆ ಮಾತನಾಡಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ಆದ್ರೆ ಮಾತುಕತೆ ವೇಳೆಯೇ ಸುಚನಾ ಪತಿ ಮೇಲೆ ರೇಗಾಡಿ ಜಗಳ ತೆಗೆದಿದ್ದಾಳೆ.

ಪೊಲೀಸರೆದುರೇ ಇಬ್ಬರೂ ಜೋರು ಜೋರಾಗಿ ಜಗಳವಾಡಿಕೊಂಡಿದ್ದಾರೆ. ನನ್ನ ಮಗನನ್ನು ಏಕೆ ಕೊಂದೆ ಎಂದು ಪತ್ನಿಯನ್ನ ವೆಂಕಟರಾಮನ್ ಪ್ರಶ್ನಿಸಿದ್ದಾರೆ. ಅದಕ್ಕೆ ಸುಚನಾ ಸೇಠ್ ನಾನು ಮಗುವನ್ನು ಕೊಂದಿಲ್ಲ ಎಂದಿದ್ದಾಳೆ. ನಾನು ಪೊಲೀಸ್ ಕಸ್ಟಡಿಯಲ್ಲಿದ್ದೇನೆ. ಆದ್ರೆ ನೀನು ಆರಾಮಾಗಿ ಹೊರಗೆ ಓಡಾಡಿಕೊಂಡಿದ್ದೀಯಾ ಎಂದು ಜಗಳ ತೆಗೆದಿದ್ದಾಳೆ. ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳ ಜೋರಾಗಿದೆ. ಕಡೆಗೆ ಕಾಲಂಗುಟೆ ಪೊಲೀಸರೇ ಮಧ್ಯಪ್ರವೇಶಿಸಿ ಜಗಳ ತಡೆದಿದ್ದಾಗಿ ಹೇಳಲಾಗ್ತಿದೆ. ಪೊಲೀಸ್ ಸ್ಟೇಷನ್‌ಲ್ಲಿ ಪತಿ ವೆಂಕಟರಾಮನ್ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು